ನಿಲ್ಲದ ರಾಜಕೀಯ ಕೆಸರೆರಚಾಟ- ಸಿಎಂ ವಿರುದ್ಧ ಇಂದು ಮತ್ತೊಂದು ಚಾರ್ಜ್‍ಶೀಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಇಂದು ಮತ್ತೊಂದು ದಾಖಲೆ ಬಿಡುಗಡೆ ಮಾಡ್ತಿದೆ.

ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 11.30ಕ್ಕೆ ಬಿ.ಜೆ.ಪುಟ್ಟಸ್ವಾಮಿ ಸುದ್ದಿಗೋಷ್ಠಿ ಕರೆದಿದ್ದು, ದಾಖಲೆ ಬಿಡುಗಡೆ ಮಾಡೋದಾಗೊ ಹೇಳಿದ್ದಾರೆ. ಇಂದಿನ ಈ ದಾಖಲೆ ಸಿದ್ದರಾಮಯ್ಯಗೆ ಸೇರಿದ ಹಗರಣ ಅಂತ ಹೇಳಿದ್ದಾರೆ.

ಮೂರು ದಿನಕ್ಕೊಂದು ಹಗರಣ ದಾಖಲೆ ಬಿಡುಗಡೆ ಮಾಡುವುದಾಗಿ ಬಿಎಸ್‍ವೈ ಘೋಷಣೆಯಂತೆ ಸಿದ್ದು ವಿರುದ್ಧ ಬಿಜೆಪಿ ಸಮರ ಸಾರಿದೆ. ಅಷ್ಟೇ ಅಲ್ಲ ಒಟ್ಟು 30 ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳು ಇವೆ ಅಂತೆ. ಆದ್ರೆ ಈಗಾಗಲೇ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಅಂತಾ ಸಿಎಂ ಎಚ್ಚರಿಕೆ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *