ಕೈಕೊಟ್ಟ ಬಯೋಮೆಟ್ರಿಕ್- ಕಚೇರಿಗೆ ಸಿಬ್ಬಂದಿ ಗೈರು- ಸಾರ್ವಜನಿಕರ ಪರದಾಟ

ವಿಜಯಪುರ: ಬಯೋಮೆಟ್ರಿಕ್ ಕೈಕೊಟ್ಟ ಪರಿಣಾಮ ಇದನ್ನೇ ದುರಪಯೋಗ ಪಡಿಸಿಕೊಂಡ ಸರ್ಕಾರಿ ಸಿಬ್ಬಂದಿ, ಕಚೇರಿಗೆ ಗೈರಾಗಿದ್ದರಿಂದ ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ.

ನಗರ ಜಿಲ್ಲಾ ಪಂಚಾಯತ್ ಬಳಿ ಇರುವ ವಿಜಯಪುರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಬಯೋಮೆಟ್ರಿಕ್ ಕೈಕೊಟ್ಟಿದೆ. ಅಲ್ಲದೇ ದಿನಾಂಕ ಮತ್ತು ಸಮಯವನ್ನು ತಪ್ಪಾಗಿ ತೋರಿಸುತ್ತಿರುವ ಬಯೋಮೆಟ್ರಿಕ್ ನಿಂದಾಗಿ ಸಿಬ್ಬಂದಿ ಸಮಯ 11:30 ಆದರೂ ಕಚೇರಿಗೆ ಆಗಮಿಸುತ್ತಿಲ್ಲ. ಇದರಿಂದಾಗಿ ಕಚೇರಿ ಟೇಬಲ್, ಕುರ್ಚಿಗಳು ಖಾಲಿ ಹೊಡೆಯುತ್ತಿವೆ.

ಇನ್ನೂ ಕೆಲವು ಸಿಬ್ಬಂದಿ ತಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿಕೊಂಡು ವಾರಾನುಗಟ್ಟಲೆ ಕೆಲಸಕ್ಕೆ ಹಾಜರಾಗಿಲ್ಲ. ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಪರದಾಟ ಅನುಭವಿಸುತ್ತಿದ್ದಾರೆ. ತಮ್ಮ ಕೆಲಸಗಳಿಗಾಗಿ ತಿಂಗಳುಗಟ್ಟಲೇ ಅಲೆದಾಡುತ್ತಿದ್ದು, ಎಸಿ ಕಚೇರಿ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *