ಬೆಂಗ್ಳೂರು-ತುಮಕೂರು ಹೈವೇಯಲ್ಲಿ ವ್ಹೀಲಿಂಗ್ – ಪೊಲೀಸರಿಗೂ ಹೆದರದೇ ಬ್ಯುಸಿ ರೋಡ್‍ನಲ್ಲಿ ಡೇಂಜರಸ್ ಸರ್ಕಸ್

ಬೆಂಗಳೂರು: ಯುವಕರಿಗೆ ಪುಂಡಾಟವಾದ್ರೆ, ರೋಡಲ್ಲಿ ಓಡಾಡೋ ಅಮಾಯಕ ಜೀವಗಳಿಗೆ ಪ್ರಾಣಸಂಕಟ. ಯಾಕಂದ್ರೆ ರಾತ್ರಿ ಹೊತ್ತು ಯುವಕರು ವ್ಹೀಲಿಂಗ್ ಮಾಡುತ್ತಾರೆ.

ಹೌದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನದ 24 ಗಂಟೆಯೂ ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಕೆಲ ಪುಂಡ ಯುವಕರು ಕೂಡ ಇದೇ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುವ ಮೂಲಕ ವಾಹನ ಸವಾರರಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ.

ಭಾನುವಾರ ರಾತ್ರಿಯೂ ನೆಲಮಂಗಲದ ತುಮಕೂರು ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ ಪುಂಡರು ವಾಹನ ಸವಾರರಿಗೆ ಕಿರಿಕ್ ಮಾಡಿದ್ದಾರೆ. ಪುಂಡ ಯುವಕರ ಗುಂಪು ಹೀಗೆ ವ್ಹೀಲಿಂಗ್ ಮಾಡುತ್ತಿದ್ದರೆ, ಗಸ್ತು ತಿರುಗುವ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Comments

Leave a Reply

Your email address will not be published. Required fields are marked *