ಅಡ್ಡಗಟ್ಟಿದ್ದಕ್ಕೆ ಹೋಂಗಾರ್ಡ್ ಮೇಲೆಯೇ ಬೈಕ್ ಹತ್ತಿಸಿದ

– ಮರ್ಮಾಂಗ, ತಲೆಗೆ ಪೆಟ್ಟು

ಮೈಸೂರು: ವಾಹನ ತಪಾಸಣೆಯ ವೇಳೆ ಹೆಲ್ಮೆಟ್ ಧರಿಸದೆ ಬರುತ್ತಿದ್ದ ಬೈಕ್ ಸವಾರನೊಬ್ಬನನ್ನು ತಡೆಯಲು ಯತ್ನಿಸಿದಕ್ಕೆ ಹೋಂಗಾರ್ಡ್ ಮೇಲೆಯೇ ವಾಹನ ಹರಿಸಿದ ಘಟನೆ ಜಿಲ್ಲೆಯ ನಂಜನಗೂಡಿನ ಹುಲ್ಲಹಳ್ಳಿ ರಸ್ತೆಯ ಎಪಿಎಂಸಿ ಬಳಿ ನಡೆದಿದೆ.

ಹೋಂಗಾರ್ಡ್ ಶಿವದಾಸ್ ಮೇಲೆ ಸವಾರ ಬೈಕ್ ಹರಿಸಿದ್ದಾನೆ. ಹುಲ್ಲಹಳ್ಳಿ ರಸ್ತೆಯ ಎಪಿಎಂಸಿ ಬಳಿ ಸಂಚಾರಿ ಪಿಎಸ್‍ಐ ಜೊತೆ ಹೋಂಗಾರ್ಡ್ ವಾಹನ ತಪಾಸಣೆ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಹೆಲ್ಮೆಟ್ ಇಲ್ಲದೆ ತೆರಳುತ್ತಿದ್ದ ಬೈಕ್ ಸವಾರನನ್ನು ತಡೆಯಲು ಹೋಂಗಾರ್ಡ್ ಯತ್ನಿಸಿದ್ದಾರೆ. ಆಗ ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಸವಾರ ತನ್ನ ಬೈಕನ್ನು ಹೋಂಗಾರ್ಡ್ ಮೇಲೆಯೇ ಹತ್ತಿಸಿ, ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಬೈಕ್ ಹರಿದ ಪರಿಣಾಮ ಹೋಂಗಾರ್ಡ್ ಅವರ ಮರ್ಮಾಂಗ ಹಾಗೂ ತಲೆಗೆ ಪೆಟ್ಟು ಬಿದಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Comments

Leave a Reply

Your email address will not be published. Required fields are marked *