ಬೈಕ್‍ಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ- ಓರ್ವ ಸವಾರನ ದುರ್ಮರಣ

ಬೆಂಗಳೂರು: ಬೈಕ್‍ಗೆ ಹಿಂಬದಿಯಿಂದ ಇನ್ನೊಂದು ಬೈಕ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಬೆಂಗಳೂರಿನ ಜಾಲಹಳ್ಳಿ ಫ್ಲೈಓವರ್ ಮೇಲೆ ನಡೆದಿದೆ.

ಯಶ್ ರಾಜ್‍ಸಿಂಗ್ ಎಂಬಾತ ಬೈಕ್ ನಲ್ಲಿ ಯಶವಂತಪುರ ಕಡೆಯಿಂದ ನೆಲಮಂಗಲದ ಕಡೆಗೆ ವೇಗವಾಗಿ ಹೋಗಿದ್ದು, ಬೈಕ್ ನ ವೇಗ ನಿಯಂತ್ರಣ ಮಾಡಲು ಸಾಧ್ಯವಾಗದೇ ಮುಂದೆ ಹೋಗ್ತಾ ಇದ್ದ ರಘುರಾಮಯ್ಯ ಎಂಬುವರ ಬೈಕಿಗೆ ಗುದ್ದಿದ್ದಾನೆ. ಪರಿಣಾಮವಾಗಿ ಐವತ್ತೈದು ವರ್ಷದ ರಘುರಾಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಿಂದ ಬೈಕ್ ಸವಾರ ಯಶ್ ರಾಜ್ ಸಿಂಗ್‍ಗೂ ಕೂಡ ಗಂಭೀರ ಗಾಯಗಳಾಗಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಮತ್ತು ಡಿಸಿಪಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆ ಸಂಬಂಧ ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *