ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮಣ್ಣಿನಲ್ಲಿ ಸಂಪೂರ್ಣ ಮುಳುಗಡೆ

ಚಿಕ್ಕಮಗಳೂರು: ಕರುಣೆಯಿಲ್ಲದ ವರುಣನ ಅಬ್ಬರಕ್ಕೆ ಮಲೆನಾಡು ಕೊಚ್ಚಿ ಹೋಗಿದೆ. ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಸಾವಿರಾರು ಜನ ನಿರ್ಗತಿಕರಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಮಲೆಮನೆ ಗ್ರಾಮದಲ್ಲಿ 12 ಮನೆ, 2 ದೇವಸ್ಥಾನ ಸಂಪೂರ್ಣ ನೆಲಸಮವಾಗಿವೆ. 3800 ಅಡಿ ಎತ್ತರದಿಂದ ಬಿದ್ದ ಗುಡ್ಡದ ಮಣ್ಣು ಇಡೀ ಗ್ರಾಮವನ್ನೇ ನಾಶ ಮಾಡಿದೆ. ಮನೆಯ ವಸ್ತುಗಳು 300 ಮೀಟರ್ ದೂರಕ್ಕೆ ಕೊಚ್ಚಿ ಹೋಗಿವೆ. ಮನೆ ಮುಂದಿದ್ದ ಬೈಕ್ ಕೂಡ ಸುಮಾರು 200 ಮೀಟರ್ ದೂರಕ್ಕೆ ಕೊಚ್ಚಿ ಹೋಗಿದೆ. ಬೈಕಿನ ಹಿಡಿ ಕಾಣುತ್ತಿದ್ದರಿಂದ ಸ್ಥಳೀಯರು ಸುತ್ತಲೂ ಅಗೆದು ಬಿಟ್ಟಿದ್ದಾರೆ.

ಕಳೆದ ಸುಮಾರು 50 -60 ವರ್ಷ ಹಿಂದೆ ಕಾಣಿದ ಮಳೆ ಈಗ ಕಂಡು ಬಂದಿದ್ದರಿಂದ ಮಲೆನಾಡಿನ ಹತ್ತಾರು ಗ್ರಾಮಗಳು ಜಲಾವೃತಗೊಂಡಿದೆ. ಭಾರೀ ಮಳೆಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ 200 ಮೀ. ಕೊಚ್ಚಿಕೊಂಡು ಬಂದ ಬೈಕ್ ಸಂಪೂರ್ಣ ಮಣ್ಣಿನಲ್ಲಿ ಮುಳುಗಡೆ ಆಗಿದೆ. ಬೈಕಿನ ಅಡಿ ಕಾಣುತ್ತಿದ್ದರಿಂದ ಸ್ಥಳೀಯರು ಅದನ್ನು ಹೊರ ತೆಗೆದಿದ್ದಾರೆ. ಬೈಕ್ ಸೇರಿದಂತೆ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಹಲವು ವಸ್ತುಗಳು ಮಣ್ಣಿನಲ್ಲಿ ಮುಚ್ಚಿಕೊಂಡು ಹೋಗಿದೆ.

Comments

Leave a Reply

Your email address will not be published. Required fields are marked *