ಕಾರಿಗೆ ಬೈಕ್ ಡಿಕ್ಕಿ- ತಲೆ ಕಾಂಕ್ರೀಟ್ ರಸ್ತೆಗೆ ಅಪ್ಪಳಿಸಿದ್ರೂ ಸವಾರ ಸೇಫ್!

ಮಂಗಳೂರು: ವೇಗವಾಗಿ ಧಾವಿಸಿ ಬಂದ ಬೈಕ್ ಸವಾರನೊಬ್ಬ ಕಾರಿಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಘಟನೆ ಮಂಗಳೂರಿನ ಬೋಂದೆಲ್ ಬಳಿಯ ಚರ್ಚ್ ಮುಂಭಾಗದಲ್ಲಿ ಘಟನೆ ನಡೆದಿದೆ.

ಬೈಕ್ ಸವಾರ ಮಂಗಳೂರಿನ ಬಜಪೆ ಏರ್ ಪೋರ್ಟ್ ಕಡೆಗೆ ವೇಗದಿಂದ ತೆರಳುತ್ತಿದ್ದ ವೇಳೆ ಕಾರಿನ ಚಾಲಕ ಚರ್ಚ್ ಮುಂಭಾಗದಲ್ಲಿ ಯು ಟರ್ನ್ ತೆಗೆದಿದ್ದಾನೆ. ಹೀಗಾಗಿ ವೇಗವಾಗಿ ಬರುತ್ತಿದ್ದ ಬೈಕ್ ನೇರವಾಗಿ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಸವಾರ ಕಾರಿನ ಮೇಲ್ಭಾಗದಿಂದ ಪಲ್ಟಿಯಾಗಿ ರಸ್ತೆಗೆ ಬಿದ್ದಿದ್ದಾನೆ.

ಆದರೆ ಹೆಲ್ಮೆಟ್ ಹಾಕ್ಕೊಂಡಿದ್ದರಿಂದ ಬೈಕ್ ಸವಾರಿ ಮಾಡುತ್ತಿದ್ದ ಯುವಕನ ತಲೆ ಕಾಂಕ್ರೀಟ್ ರಸ್ತೆಗೆ ಅಪ್ಪಳಿಸಿದ್ದರೂ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾನೆ.

ಅಪಘಾತದ ದೃಶ್ಯ ಕಟ್ಟಡವೊಂದರ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಿನಿಮೀಯ ರೀತಿಯಲ್ಲಿ ನಡೆದಂತಿದೆ.

Comments

Leave a Reply

Your email address will not be published. Required fields are marked *