ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್

ಬಿಗ್ ಬಾಸ್ ಮನೆಯ ಚಿತ್ರಣ ಇದೀಗ ಬದಲಾಗಿದೆ. ದಿನದಿಂದ ದಿನಕ್ಕೆ ಒಂದಲ್ಲಾ ಒಂದು ವಿಚಾರಕ್ಕೆ ಜಗಳ, ಭಿನ್ನಾಭಿಪ್ರಾಯ ಜೋರಾಗುತ್ತಿದೆ. ಇದೀಗ ಊಟದ ವಿಚಾರಕ್ಕೆ ಮನೆಯಲ್ಲಿ ಮಾತಿನ ಚಕಮಕಿ ಜೋರಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಇದೀಗ ಮೂರನೇ ವಾರದ ಜಟಾಪಟಿ ಜೋರಾಗಿದೆ. ಸ್ಪರ್ಧಿಗಳ ನಡುವೆ ಕಾಂಪಿಟೇಷನ್ ಕೂಡ ಮತ್ತಷ್ಟು ಜಟಿಲವಾಗಿದೆ. ಮನೆಯಿಂದ ಒಬ್ಬಬ್ಬರಾಗಿ ಎಲಿಮಿನೇಟ್ ಆಗಿ ಹೋಗುತ್ತಿದ್ದಾರೆ. ಇನ್ನು ಇದೀಗ ಊಟದ ವಿಚಾರಕ್ಕೆ ಜಗಳ ಅಗಿದೆ. ಜಯಶ್ರೀ ತಮಗೆ ಹೊಟ್ಟೆ ಹಸಿವು ಎಂಬ ಕಾರಣಕ್ಕೆ ಬೇಗ ತಿಂಡಿ ತಿನ್ನುತ್ತಿದ್ದರು. ಈ ವೇಳೆ ಅನ್ನ ಬೆಂದಿಲ್ಲ, ಹಾಗೆ ಹೀಗೆ ಎಂದು ಸೋನು ಖ್ಯಾತೆ ತೆಗೆದರು. ಇದನ್ನೂ ಓದಿ:ಮೂರನೇ ವಾರ ನಾಮಿನೇಷನ್‌ ಸ್ಟಾರ್ಟ್‌: ಉದಯ್‌ ಸೂರ್ಯಗೆ ಮನೆಯಿಂದ ಗೇಟ್‌ ಪಾಸ್?

ಅದಕ್ಕೆ ಜಯಶ್ರೀ ನನಗೆ ತಿಂಡಿ ಚೆನ್ನಾಗಿದೆ ನಾನು ತಿನ್ನುತ್ತಿದ್ದೇನೆ. ಯಾರಿಗೆ ಸರಿ ಆಗಿಲ್ಲ, ಮತ್ತೆ ಕುಕ್ಕರ್ ವಿಸಿಲ್ ಹೊಡಿಸಿ, ತಿನ್ನಲಿ ಬಿಡಿ ಎಂದು ಆರ್ಯವರ್ಧನ್ ಬಳಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಸೋನು ಕೂಡ ,ನಾನು ಯಾರಿಗೂ ಡಿಪೆಂಡ್ ಆಗಲ್ಲಾ ಎಂದು ಮಾತನಾಡಿದ್ದಾರೆ. ರೂಪೇಶ್ ಶೆಟ್ಟಿ ಕೂಡ ಧ್ವನಿಗೂಡಿಸಿ, ನಿಮ್ಮ ಮಾತಿಗೆ ಬದ್ದರಾಗಿರಿ ಎಂದು ಸೋನುಗೆ ರೂಪೇಶ್ ಟಾಂಗ್ ಕೊಟ್ಟಿದ್ದಾರೆ. ಸೋನು ಕೂಡ ತನಗೆ ಹೇಗೆ ಬೇಕೋ ತಾನೇ ಮಾಡಿಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ.

ಈ ಮೊದಲು ಮೊಟ್ಟೆ ವಿಚಾರಕ್ಕೆ ಸೋನು ಜಗಳ ಆಡಿದ್ದರು. ಇದೀಗ ಊಟದ ವಿಚಾರಕ್ಕೆ ಮತ್ತೆ ಧ್ವನಿ ಎತ್ತಿದ್ದಾರೆ. ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುವ ಸೋನು ಮೂರನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *