ಬೆಂಗಳೂರು: ಸಿಂಪಲ್ ಮದುವೆ ಆಗುವವರಿಗೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ದೇವಸ್ಥಾನದಲ್ಲಿ ಇನ್ಮುಂದೆ ಮದುವೆ ಆಗುವುದಕ್ಕೆ ಅನುಮತಿಯಿಲ್ಲ.
ಮುಜರಾಯಿ ಇಲಾಖೆ ದೇಗುಲದಲ್ಲಿ ಮದುವೆಯನ್ನು ನಿಷಿದ್ಧ ಮಾಡಿದೆ. ಪತಿ ಅಥವಾ ಪತ್ನಿಗೆ ಹೇಳದೇ ಇನ್ನೊಂದು ವಿವಾಹ, ಕುಟುಂಬಕ್ಕೆ ಮಾಹಿತಿ ನೀಡದೇ ಮದ್ವೆ, ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಕೊಳ್ಳುವುದು ಹೀಗೆ ಅನೇಕ ಪ್ರಕರಣ ನಡೆಯುತ್ತಿದ್ದು, ಕೇಸ್ಗಳಾದರೆ ಅರ್ಚಕರೇ ಸಾಕ್ಷಿಗಳಾಗಬೇಕಾಗುತ್ತೆ.
ಅಲ್ಲದೇ ಕೆಲವರು ಅರ್ಚಕರಿಗೆ ಹೆದರಿಸಿ ಬೆದರಿಸಿ ಮದುವೆ ಮಾಡುವಂತೆ ಕಿರಿಕ್ ಮಾಡುತ್ತಿದ್ದಾರೆ. ಇದಕ್ಕಾಗಿ ಅರ್ಚಕರೇ ಸ್ವತಃ ಮುಜರಾಯಿಗೆ ಮನವಿ ಮಾಡಿದ್ದು ಈಗ ನಗರದ ಎಲ್ಲಾ ಮುಜರಾಯಿಯಲ್ಲೂ ಮದುವೆ ಬ್ಯಾನ್ ಮಾಡಲಾಗಿದೆ.

ದೇಗುಲಕ್ಕೆ ಹೊಂದಿಕೊಂಡ ಕಲ್ಯಾಣ ಮಂಟಪದಲ್ಲಿ ಮದುವೆಯಾಗಬೇಕು ಎಂದರೂ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಿ ಮೂವತ್ತು ದಿನಗಳಾಗಿರಬೇಕು. ನಂತರವಷ್ಟೇ ಮದುವೆಗೆ ಅನುಮತಿ ನೀಡಲಾಗುತ್ತಿದೆ.
ಸದ್ಯ ಇದರ ಜೊತೆಗೆ ನಾಮಕರಣ, ಸೇರಿದಂತೆ ದೇವಸ್ಥಾನದಲ್ಲಿ ನಡೆಯುವ ಇತರೇ ಕಾರ್ಯಕ್ರಮಗಳಿಗೆ ಮುಜರಾಯಿ ನಿಷೇಧವನ್ನು ಹೇರಿದೆ.

ಈ ಬಗ್ಗೆ ಅರ್ಚಕರೊಬ್ಬರು ಮಾತನಾಡಿ, ತಂದೆ-ತಾಯಿ ವಿರೋಧ ವ್ಯಕ್ತಪಡಿಸಿ, ಮದುವೆ ಇಷ್ಟವಿಲ್ಲವೆಂದ್ರೆ ಪ್ರೇಮಿಗಳು ದೇವಸ್ಥಾನಕ್ಕೆ ಬಂದು ತಾಳಿ ಕಟ್ಟಿ ಹೋಗುತ್ತಿದ್ದರು. ಬಳಿಕ ಹೆತ್ತವರ ಗಲಾಟೆಗಳಿಂದ ಬಿಟ್ಟು ಹೋಗುತ್ತಿದ್ದರು. ಇಂತಹ ಅನೇಕ ಘಟನೆಗಳು ನಡೆಯುತ್ತಿವೆ. ಇದರಿಂದ ನಮಗೆ ತುಂಬಾ ತೊಂದರೆಗಳಾಗುತ್ತಿತ್ತು. ಹೀಗಾಗಿ ದಯಮಾಡಿ ದೇವಸ್ಥಾನಗಳಲ್ಲಿ ಮದುವೆ ಮಾಡುವ ಮೊದಲು ಕಮಿಷನ್ ಗೆ ಪತ್ರ ಬರೆದು ಎರಡೂ ಕಡೆಯವರು ಒಪ್ಪಿಕೊಂಡು ನಂತರ ಕಮಿಷನರ್ ಆಯಾ ಪ್ರದೇಶದ ದೇವಸ್ಥಾನದಲ್ಲಿ ಮದುವೆ ಮಾಡಿಕೊಡಲು ಅನುಮತಿ ನೀಡಬೇಕು ಅಂತ ನಾವೆಲ್ಲರೂ ಸೇರಿ ಮುಜರಾಯಿ ಇಲಾಖೆಗೆ ಪತ್ರ ಬರೆದಿದ್ದೆವು. ಹೀಗಾಗಿ ಸದ್ಯ ಕೆಲ ದೇವಸ್ಥಾನಗಳನ್ನು ಬಿಟ್ಟು ಉಳಿದೆಲ್ಲಾ ದೇವಾಲಯಗಳಲ್ಲಿ ಪ್ರೇಮಿಗಳಿಗೆ ಮದುವೆ ಮಾಡುವುದುನ್ನು ನಿಲ್ಲಿಸಲಾಗಿದೆ ಅಂತ ಹೇಳಿದ್ರು.

ಮದುವೆ ನಡೆಯುತ್ತಿದ್ದ ಪ್ರಮುಖ ಮುಜರಾಯಿ ದೇವಾಲಯ
1. ಹಲಸೂರು ಸುಬ್ರಮಣ್ಯ ದೇಗುಲ – ಬೆಂಗಳೂರು
2. ಬನಶಂಕರಿ ದೇಗುಲ ಬೆಂಗಳೂರು
3. ಕುಕ್ಕೆ ಸುಬ್ರಮಣ್ಯ ದೇಗುಲ
4. ಗವಿಗಂಗಾಧರ ದೇಗುಲ
5. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನ
6. ನಿಮಿಷಾಂಬಾ ದೇಗುಲ ಮಂಡ್ಯ
7. ಕೊಲ್ಲೂರು ಮೂಕಾಂಬಿಕ ದೇಗುಲ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply