ಬಾಗಲಕೋಟೆ: ಇದ್ದಕ್ಕಿದ್ದಂತೆ ಮನೆಗಳಲ್ಲಿ ದಿಢೀರ್ ಬಿರುಕು ಕಾಣಿಸಿಕೊಳ್ಳುತ್ತಿರುವ ಘಟನೆ ಬಾಗಲಕೋಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಮನೆಗಳಲ್ಲಿ ದಿಢೀರ್ ಬಿರುಕು ಬಿಟ್ಟಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಕೇವಲ ಮೂರೇ ದಿನಗಳಲ್ಲಿ ಮನೆ ಗೋಡೆಗಳಲ್ಲಿ ವಿಪರೀತ ಬಿರುಕು ಕಾಣಿಸಿಕೊಂಡು ಮನೆಗಳು ಕುಸಿಯುವ ಭೀತಿಯಲ್ಲಿ ಇವೆ.

ಗ್ರಾಮದ ಬಸವ್ವ ಮಸಳಿ, ಬುಡ್ಡೇಸಾಬ ಮಕಾಶಿ, ಸೋಮಪ್ಪ ಮಸಳಿ ಎಂಬವರ ಮನೆ ಗೋಡೆಗಳು ದಿಢೀರ್ ಆಗಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ನಮ್ಮ ಮನೆಗಳು ಹೀಗಾದರೆ ಹೇಗೆ ಎಂದು ಇಡೀ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿರುಕು ಬಿಡಲು ಸ್ಪಷ್ಟ ಕಾರಣ ಮಾತ್ರ ತಿಳಿದು ಬಂದಿಲ್ಲ. ಇತ್ತ ಸುದ್ದಿ ತಿಳಿದು ಸ್ಥಳಕ್ಕೆ ಗ್ರಾಮ ಪಂಚಾಯತ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಹಿರಿಯ ಅಧಿಕಾರಿಗಳಿಗೂ ಸಹ ವರದಿ ನೀಡಿದ್ದಾರೆ.

Leave a Reply