ಜೆಸಿಬಿಯಿಂದ ಗೋಡೆ ಒಡೆದು ಬ್ಯಾಂಕ್ ದರೋಡೆಗೆ ಯತ್ನ!

– ಮೊಬೈಲ್ ಅಲರ್ಟ್‍ನಿಂದ ತಪ್ಪಿತು ಕಳ್ಳತನ

ಬೀದರ್: ಎಸ್‍ಬಿಐ ಬ್ಯಾಂಕ್ ಗೋಡೆಯನ್ನು ಜೆಸಿಬಿಯಿಂದ ಒಡೆದು ಬ್ಯಾಂಕ್ ದರೋಡೆ ಮಾಡಲು ಯತ್ನಿಸಿದ ಘಟನೆ ಬೀದರ್‍ನಲ್ಲಿ ನಡೆದಿದೆ.

ಒಳಗೆ ನುಗ್ಗಿದ ಇಬ್ಬರು ದರೋಡೆಕೋರರು ಬ್ಯಾಂಕಿನ ಬಾಗಿಲನ್ನ ರಾಡಿನಿಂದ ಹೊಡೆದು ಮುರಿಯಲು ಯತ್ನ ಮಾಡಿದ್ದಾರೆ. ಆದರೆ ಬಾಗಿಲು ಮುರಿಯಲು ಎಷ್ಟೇ ಯತ್ನಿಸಿದರೂ ಅದು ವಿಫವಾಗಿದೆ.

ಬ್ಯಾಂಕಿನ ದರೋಡೆ ಯತ್ನ ಮಾಡುತ್ತಿದ್ದಾಗ ಬ್ಯಾಂಕ್ ಮ್ಯಾನೇಜರ್ ಮೊಬೈಲ್‍ಗೆ ಅಲರ್ಟ್ ಸಂದೇಶ ಹೋಗಿದೆ. ಅಲರ್ಟ್ ಬಳಿಕ ಎಚ್ಚರಗೊಂಡ ಬ್ಯಾಂಕ್ ಮ್ಯಾನೇಜರ್ ಪೋಲಿಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸಂತಪೂರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪೊಲೀಸರು ಆಗಮನದ ಮಾಹಿತಿ ಅರಿತ ದರೋಡೆಕೋರರು, ತಕ್ಷಣ ಪರಾರಿಯಾಗಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ್‍ನ ಎಸ್‍ಬಿಐ ಬ್ಯಾಂಕಿನಲ್ಲಿ ಈ ದರೋಡೆ ಯತ್ನ ನಡೆದಿದ್ದು ಖದೀಮರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಎಕ್ಸ್ ಕ್ಲೂಸಿವ್ ಸಿಸಿಟಿವಿ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಈ ಸಂಬಂಧ ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *