ಸಿಡಿಲಿಗೆ ಗೋಪುರ, ಗೋಡೆ ಮುರಿದು ಹೋದರೂ ಭಕ್ತರಿಗೆ ಏನು ಆಗಿಲ್ಲ

ಬೀದರ್: ಸಿಡಿಲು ಬಡಿದರೂ ಭಕ್ತರು ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಉಪ್ಪಳ ಗ್ರಾಮದ ಬಳಿ ಇರುವ ಗುತ್ತಿ ಭವಾನಿ ಮಾತಾ ದೇವಸ್ಥಾನದಲ್ಲಿ ನಡೆದಿದೆ.

ವಿಜಯದಶಮಿ ಹಿನ್ನೆಲೆಯಲ್ಲಿ ತಡರಾತ್ರಿಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಇಂದು ಬೆಳಗ್ಗೆ ದೇವಾಲಯಕ್ಕೆ ಸಿಡಿಲು ಬಡಿದಿದೆ. ಸಿಡಿಲ ಬಡಿತಕ್ಕೆ ದೇವಸ್ಥಾನದ ಗೋಪುರ, ಗೋಡೆ ಮುರಿದು ಹೋದರೂ ದೇವಸ್ಥಾನದ ಒಳಗಡೆ ಇದ್ದ ಭಕ್ತರು ಪವಾಡ ಎಂಬಂತೆ ಅಪಾಯದಿಂದ ಪಾರಾಗಿದ್ದಾರೆ.

ಭಕ್ತರೊಬ್ಬರು ಪ್ರತಿಕ್ರಿಯಿಸಿ, ಬಡಿದ ಸಿಡಿಲು ದೇವಾಲಯ ಒಳಗಡೆ ಹೋದ ಅನುಭವವಾಗಿದೆ. ನಂತರ ಈ ಸಿಡಿಲು ಕಾಣೆ ಆಗಿದ್ದು ಹೇಗೆ ಎನ್ನುವುದೇ ಆಶ್ಚರ್ಯ ಎಂದು ಹೇಳಿದ್ದಾರೆ.

ಈಗ ಸಿಡಿಲನ್ನೇ ತಡೆದು ಭಕ್ತರನ್ನು ಕಾಪಾಡಿದ ಭಾವಾನಿ ಮಾತಾ ದೇವಸ್ಥಾನ ನೋಡಲು ಸುತ್ತಮುತ್ತಲಿನ ಗ್ರಾಮಗಳ ಭಕ್ತರ ದಂಡು ಹರಿದು ಬರುತ್ತಿದೆ.

Comments

Leave a Reply

Your email address will not be published. Required fields are marked *