ಬಂಗಾರ ಕರಗಿಸಿ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ ವ್ಯಾಪಾರಿಯ ಬಂಧನ

ಬೀದರ್: ಬಂಗಾರ ಕರಗಿಸಿ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ ಚಿನ್ನಾಭರಣ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ ಘಟನೆ ಇಂದು ಬೀದರ್‌ನಲ್ಲಿ ನಡೆದಿದೆ.

ಬೀದರ್ ನಗರದ ಉಸ್ಮಾನ್ ಗಂಜ್‌ನಲ್ಲಿರುವ ಅಂಬಾಭವಾನಿ ಗೋಲ್ಡ್ ರಿಫೈನರಿ ಚಿನ್ನಾಭರಣ ಮಾಲೀಕನಿಂದ ವಂಚನೆಯಾಗಿದ್ದು, ನ. 21ರಂದು ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಬಿ ಗ್ರಾಮದ ಗಣೇಶ್ ನರಸಿಂಹ ಎಂಬುವರು ದೂರು ನೀಡಿದ್ದರು.

Man in prison hands of behind hold Steel cage jail bars. offender criminal locked in jail.

ದೂರು ದಾಖಲಾದ ಬಳಿಕ ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸಿ 41 ಲಕ್ಷ 30 ಸಾವಿರ ರೂ. ಮೌಲ್ಯದ 826 ಗ್ರಾಮ ತೂಕದ ಬಂಗಾರದ ಬಿಸ್ಕಿಟ್ ಹಾಗೂ 16 ಲಕ್ಷ ರೂ. ಮೌಲ್ಯದ ಬಂಗಾರ ಪರೀಕ್ಷಿಸುವ ಯಂತ್ರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಸಚಿವರಿಗೆ ಬಿಜೆಪಿ ಶಾಸಕರಿಂದಲೇ ಶಾಕ್..!

ಒಟ್ಟು 57 ಲಕ್ಷ 30 ಸಾವಿರ ರೂ. ಬೆಲೆ ಬಾಳುವ ಸ್ವತ್ತನ್ನು ಬೀದರ್ ಪೊಲೀಸರಿಂದ ಜಪ್ತಿ ಮಾಡಿದ್ದು, ಈ ಕುರಿತು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಮೈಸೂರು ಅರಮನೆ ಆನೆಗಳು ಗುಜರಾತ್‌ಗೆ ಶಿಫ್ಟ್‌

Comments

Leave a Reply

Your email address will not be published. Required fields are marked *