ಇವರಿಬ್ಬರೂ ಗಂಡ-ಹೆಂಡ್ತಿ ಆಗ್ತಾರಾ: ಹರೀಶ್ ರಾಜ್

ಬೆಂಗಳೂರು: ಶೈನ್ ಶೆಟ್ಟಿ ಮತ್ತು ಭೂಮಿ ಶೆಟ್ಟಿ ಜಗಳ ಮಾಡಿಕೊಂಡೆ ಗಂಡ-ಹೆಂಡತಿ ಆಗುತ್ತಾರಾ ಎಂಬ ಅನುಮಾನ ಇದೆ ಅಂತಾ ಹರೀಶ್ ರಾಜ್ ಹೇಳಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ಕೆಲವು ವಾರಗಳಿಂದ ಶೈನ್ ಶೆಟ್ಟಿ ಮತ್ತು ಭೂಮಿ ಸದಾ ಒಟ್ಟಿಗೆ ಇರುತ್ತಾರೆ. ಆಗಾಗ ತಮಾಷೆ, ಜಗಳ ಮಾಡಿಕೊಂಡು ಮನೆಯಲ್ಲಿ ಲವಲವಿಕೆಯಿಂದ ಇದ್ದಾರೆ. ಅಲ್ಲದೇ ನಾವಿಬ್ಬರೂ ಗಂಡ-ಹೆಂಡತಿ ಎಂದು ತಮಾಷೆ ಮಾಡಿಕೊಂಡು ರೇಗಿಸುತ್ತಿದ್ದರು. ಈ ವಿಚಾರ ಮನೆಯ ಸದಸ್ಯರಿಗೂ ತಿಳಿದಿದೆ.

ಬುಧವಾರ ಅಡುಗೆ ಮನೆಯಲ್ಲಿ ಶೈನ್, ಭೂಮಿ ಮತ್ತು ವಾಸುಕಿ ಮಾತನಾಡಿಕೊಂಡು ನಿಂತಿದ್ದರು. ಆಗ ಶೈನ್ ತಮಾಷೆಗೆ ಭೂಮಿ ತಲೆಯ ಮೇಲೆ ಹೊಡೆದು ಓಡಿ ಹೋಗಿದ್ದಾರೆ. ಆಗ ಭೂಮಿ, ಶೈನ್ ಶೆಟ್ಟಿಯನ್ನು ಓಡಿಸಿಕೊಂಡು ಹೋಗಿದ್ದರು. ಮತ್ತೆ ಬಿಗ್‍ಬಾಸ್ ನೀಡಿದ್ದ ಟಾಸ್ಕ್ ಮುಗಿಸಿ ದೀಪಿಕಾ, ಪ್ರಿಯಾಂಕಾ ಮತ್ತು ಭೂಮಿ ಅಡುಗೆ ಮನೆಯಲ್ಲಿ ಮಾತನಾಡುತ್ತಿದ್ದರು. ಇತ್ತ ವಾಸುಕಿ, ಹರೀಶ್ ರಾಜ್ ಮತ್ತು ಕುರಿ ಪ್ರತಾಪ್ ಸೋಫಾ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದರು.

ಈ ವೇಳೆ ಶೈನ್ ಹಿಂದೆಯಿಂದ ಬಂದು ಭೂಮಿಯನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಭೂಮಿ ಮಿರರ್ ಇರುವುದು ಏನಿಕ್ಕೋ ಎಂದು ಬೈದಿದ್ದಾರೆ. ಇದರಿಂದ ಕೋಪಗೊಂಡ ಶೈನ್ ಮತ್ತೆ ಭೂಮಿ ತಲೆ ಮೇಲೆ ಹೊಡೆದು ಓಡಿ ಹೋಗಿದ್ದಾರೆ.

ಆಗ ಮತ್ತೆ ಭೂಮಿ, ಶೈನ್ ಶೆಟ್ಟಿಯನ್ನು ಓಡಿಸಿಕೊಂಡು ಹೊಡೆಯಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರು ತಮಾಷೆಗೆ ಗುದ್ದಾಡಿಕೊಂಡಿದ್ದಾರೆ. ಇದನ್ನು ನೋಡಿದ ಹರೀಶ್ ರಾಜ್ ಅವರು, ಇದ್ಯಾಕೋ ಇವರು ಈ ರೀತಿ ಜಗಳ ಮಾಡಿಕೊಂಡೇ ಭೂಮಿ ಹೇಳುವ ರೀತಿ ಇವರಿಬ್ಬರೂ ಗಂಡ-ಹೆಂಡತಿ ಆಗುತ್ತಾರಾ ಎಂಬ ಡೌಟ್ ಇದೆ ಎಂದಿದ್ದಾರೆ. ಇದನ್ನು ಕೇಳಿಸಿಕೊಂಡು ಕುರಿ ಪ್ರತಾಪ್ ಮತ್ತು ವಾಸುಕಿ ನಕ್ಕಿದ್ದಾರೆ.

Comments

Leave a Reply

Your email address will not be published. Required fields are marked *