ಉಡುಪಿಯಲ್ಲಿ ಬಂದ್ ವೇಳೆ ಮಾತಿನ ಚಕಮಕಿ- ಪೊಲೀಸರ ಮಧ್ಯಪ್ರವೇಶ

ಉಡುಪಿ: ಜಿಲ್ಲೆಯಾದ್ಯಂತ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಶಾಂತಿಯುತವಾಗಿದೆ. ಬಿಜೆಪಿ ಭದ್ರಕೋಟೆಯಲ್ಲಿ ಅಂಗಡಿ ಮುಗ್ಗಟ್ಟುಗಳು ತೆರೆದಿವೆ. ಖಾಸಗಿ ಬಸ್ ಗಳು ಕೂಡ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ನಗರದಾದ್ಯಂತ ಜನರ ಸಂಚಾರ ವಿರಳವಾಗಿದೆ.

ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಸೋಮವಾರವೇ ರಜೆ ಘೋಷಿಸಿತ್ತು. ಬೆಳಗ್ಗೆ ಖಾಸಗಿ ಬಸ್ ಚಾಲಕರು ಬಸ್ ಓಡಿಸದೇ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ರು. ಆಟೋಗಳು ಬಂದ್ ಆಚರಿಸದೆ ಎಂದಿನಂತೆ ಕರ್ತವ್ಯ ನಿರ್ವಹಿಸಲು ಬಂದಾಗ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಆಟೋ ಚಾಲಕರು ಬಂದ್ ನ ಸಂಪೂರ್ಣ ಲಾಭ ಪಡೆಯಲು ಮುಂಜಾನೆಯಿಂದಲೇ ಆಟೋ ಸಂಚಾರ ಪ್ರಾರಂಭಿಸಿದ್ದರು.

ಬಸ್ ಚಾಲಕರು ಕರ್ತವ್ಯಕ್ಕೆ ಅಣಿಯಾದಾಗ ಕಾರ್ಮಿಕ ಸಂಘಟನೆ ಮುಖಂಡರು ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದ್ರು. ಈ ವೇಳೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಬಸ್ ಚಾಲಕರು, ಆಟೋ ಚಾಲಕರು ಎಂದಿನಂತೆ ಕಾರ್ಯನಿರ್ವಹಿಸ್ತಿದ್ದಾರೆ. ನಾವೂ ಬಸ್ ಓಡಿಸುತ್ತೇವೆ ಎಂದು ಏರುದನಿಯಲ್ಲಿ ಹೇಳಿದ್ರು. ಇದು ಕೆಲಕಾಲ ಮಾತಿನ ಚಕಮಕಿಗೆ ಕಾರಣವಾಯ್ತು.

ಪೊಲೀಸರು ಹೆಚ್ಚಿನ ಭದ್ರತಾ ಕ್ರಮಕೈಗೊಂಡರು. ಕೆಎಸ್ ಆರ್ ಪಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *