ನನ್ನನ್ನು ಅತ್ತಿಗೆ ಅನ್ನಬೇಡಿ ಎಂದ್ರು ದೀಪಿಕಾ

ಮುಂಬೈ: ಬಾಲಿವುಡ್ ನ ಮುದ್ದಾದ ಜೋಡಿ ದೀಪಿಕಾ- ರಣವೀರ್ ಇತ್ತೀಚೆಗೆಯಷ್ಟೇ ಇಟಲಿಯ ಲೇಕ್ ಕೊಮೊ ದಲ್ಲಿ ವೈವಾಹಿಕ ಜೀವನಕ್ಕೆ ಕಾಲಿದ್ದಾರೆ. ಈ ಮಧ್ಯೆ ಈ ಜೋಡಿ ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜನೆ ಮಾಡಿತ್ತು. ಈ ವೇಳೆ ದೀಪಿಕಾ ಮಾಧ್ಯಮದವರಿಗೆ ಅತ್ತಿಗೆ ಅಂತ ಕರೆಯಬೇಡಿ ಎಂದು ಹೇಳಿದ್ದಾರೆ.

ದೀಪಿಕಾ ಮತ್ತು ರಣ್‍ವೀರ್ ದಂಪತಿ ಬೆಂಗಳೂರಿನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದ ಬಳಿಕ, ಸಿನಿಮಾರಂಗದವರು ಮತ್ತು ಸ್ನೇಹಿತರಿಗಾಗಿ ಮುಂಬೈನಲ್ಲಿ ಯಲ್ಲಿ ಕೂಡ ಆರತಕ್ಷತೆಯನ್ನು ಆಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳು, ಸ್ನೇಹಿತರಿಲ್ಲರೂ ಅವರಿಗೆ ಶುಭಾಶಯವನ್ನು ತಿಳಿಸುತ್ತಿದ್ದರು. ಆಗ ಆರತಕ್ಷತೆ ಕಾರ್ಯಕ್ರಮದಲ್ಲಿ ಮಾಧ್ಯಮದವರೊಬ್ಬರು ದೀಪಿಕಾರನ್ನು `ಅತ್ತಿಗೆ’ ಎಂದು ಕರೆದಿದ್ದಾರೆ.

ಅತ್ತಿಗೆ ಎಂದು ಕರೆದ ತಕ್ಷಣ ದೀಪಿಕಾ ಪ್ರತಿಕ್ರಿಯಿಸಿ, ಅತ್ತಿಗೆ ಅಂತ ಕರೆಯಬೇಡಿ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ದೀಪ್ ವೀರ್ ವೆಡ್ಡಿಂಗ್ ಅಪ್‍ಡೇಟ್ಸ್ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ದೀಪಿಕಾ ಮತ್ತು ರಣ್‍ವೀರ್ ನವೆಂಬರ್ 14 ರಂದು ಇಟಲಿಯಲ್ಲಿ ಮದುವೆಯಾಗಿದ್ದರು. ಬಳಿಕ ಮೊದಲು ಮುಂಬೈಗೆ ಆಗಮಿಸಿದ್ದ ನವದಂಪತಿ ಆತ್ಮೀಯರಿಗೆ ತಮ್ಮ ಆರತಕ್ಷತೆಯ ಆಹ್ವಾನವನ್ನು ನೀಡಿದ್ದರು. ಅದೇ ತಿಂಗಳು 21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಎರಡನೇ ಆರತಕ್ಷತೆಯನ್ನು ಮಾಡಿಕೊಂಡಿದ್ದರು. ಸಿನಿಮಾ ಸ್ನೇಹಿತರಿಗಾಗಿಯೇ ಮೂರನೇ ಬಾರಿಯೂ ಆರತಕ್ಷತೆಯನ್ನು ಮುಂಬೈನಲ್ಲಿಯೇ ಮಾಡಿದ್ದರು.

https://www.instagram.com/p/Bq29401nYoh/?utm_source=ig_embed

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *