ಬೆಂಗಳೂರು : ಏಕ ಕಾಲದಲ್ಲಿ ಲಕ್ಷಾಂತರ ಮಕ್ಕಳ ಕಂಠ ಸಿರಿಯಲ್ಲಿ ಶ್ರೀ ಶಂಕರಾಚಾರ್ಯವಿರಚಿತ ಪ್ರಶೋತ್ತರರತ್ನ ಮಾಲಿಕೆಯ ಸಂಗ್ರಹವಾದ ವಿವೇಕದೀಪಿನಿಯ ಸಾಮೂಹಿಕ ಶ್ಲೋಕ ಪಠಣ ಯಶಸ್ವಿಯಾಗಿ ಮೂಡಿಬಂತು. ಅರಮನೆ ಮೈದಾನದ ಕೃಷ್ಣ ವಿಹಾರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಕ್ಕಳು ಶ್ಲೋಕ ಪಠಣ ಮಾಡಿ ಹೊಸ ಇತಿಹಾಸಕ್ಕೆ ಸಾಕ್ಷಿಯಾದರು.
ವೇದಾಂತ ಭಾರತಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದರು. ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸಿಎಂ ಯಡಿಯೂರಪ್ಪ, ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
https://twitter.com/AmitShah/status/1218520310120468480
ಬೆಂಗಳೂರಿನ 500ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆ ಶ್ಲೋಕಗಳನ್ನ ವೇದಾಂತ ಭಾರತಿ ಸಂಸ್ಥೆ ಸುಮಾರು 6 ತಿಂಗಳಿಂದ ಕಲಿಸುತ್ತಿದ್ದರು. ಇಂದು ಅಂತಿಮವಾಗಿ ಏಕ ಕಾಲಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಶ್ಲೋಕ ಪಠಣ ಮಾಡುವ ಕಾರ್ಯಕ್ರಮವನ್ನ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತನಾಡಿ, ಶಂಕರಾಚಾರ್ಯರ ತತ್ವ ಆದರ್ಶಗಳನ್ನ ಜೀವನದಲ್ಲಿ ಅಳವಡಿಕೊಳ್ಳಬೇಕು. ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆ ಅಭ್ಯಾಸದಿಂದ ನಮ್ಮ ಜೀವನವೇ ಬದಲಾಗುತ್ತೆ ಅಂತ ಮಕ್ಕಳಿಗೆ ನೀತಿ ಪಾಠ ಮಾಡಿದ್ರು.
ಸಿಎಂ ಯಡಿಯೂರಪ್ಪ, ಮಾತನಾಡಿ, ವಿವೇಕದೀಪಿನಿ ಕಾರ್ಯಕ್ರಮಕ್ಕೆ ಶಾಲೆಗಳಲ್ಲಿ ಶ್ಲೋಕ ಕಲಿಕೆಗೆ ಸರ್ಕಾರ ಅನುಮತಿ ಕೊಟ್ಟಿದೆ. ವಸುದೈವಕ ಕುಟುಂಬಕಂ, ಸರ್ವೆ ಜನ ಸುಖಿನೋ ಭವಂತೂ ಅನ್ನೋ ಸಂಸ್ಕಾರದಲ್ಲಿ ನಾವು ಇದ್ದೇವೆ. ಶಂಕರಾಚಾರ್ಯರ ಶ್ಲೋಕಗಳು ಇವತ್ತಿನ ಜೀವನಕ್ಕೆ ಹೋಲುತ್ತವೆ ಅಂತ ತಿಳಿಸಿದ್ರು.
ಪರಮಪೂಜ್ಯ ಶ್ರೀ ಶ್ರೀ ಶಂಕರಭಾರತೀ ಸ್ವಾಮೀಜಿ ಮಾತಾಡಿ, ಉತ್ತಮ ಸಮಾಜ ನಿರ್ಮಾಣದ ಕೆಲಸ ಆಗಬೇಕಾದ್ರೆ, ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆ ಪಠಣ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂತ ಮಾವಿನ ಹಣ್ಣಿನ ಕಥೆ ಸಮೇತ ಮಾರ್ಗದರ್ಶನ ನೀಡಿದರು.

Leave a Reply