10 ಲಕ್ಷ ರೂ. ಬೆಲೆಬಾಳುವ 281 ಪಿಒಪಿ ಗಣೇಶನ ಮೂರ್ತಿ ಜಪ್ತಿ

ಬೆಂಗಳೂರು: ಬಿಬಿಎಂಪಿ ಆರೋಗ್ಯಾಧಿಕಾರಿಗಳು ಪಿಒಪಿ ಗಣೇಶ ಮಾರಾಟ ಮಳಿಗೆಗಳ ಮೇಲೆ ಇಂದು ದಾಳಿ ಮಾಡಿದ್ದಾರೆ.

ಇಂದು ದಕ್ಷಿಣ ವಲಯದ ಆರೋಗ್ಯಾಧಿಕಾರಿಗಳಿಂದ ಪಿಒಪಿ ಗಣೇಶ ಮೂರ್ತಿಗಳ ಮುಟ್ಟುಗೋಲು ಕಾರ್ಯಾಚರಣೆ ಮಾಡಿದರು. ನಗರದ ಮಿನರ್ವ ಸರ್ಕಲ್ ನಲ್ಲಿರೋ ಮಳಿಗೆಗಳು ಮತ್ತು ಲಾಲ್ ಬಾಗ್ ಪಶ್ಚಿಮ ದ್ವಾರದ ಆರ್ ವಿ ರಸ್ತೆಯ ಮಾವಳ್ಳಿ ಸುತ್ತ ಮುತ್ತ ಪಿಒಪಿ ಮೂರ್ತಿಗಳ ತಯಾರಿಕ ಮತ್ತು ಮಾರಾಟ ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದರು.

ಈ ವೇಳೆ 10 ಲಕ್ಷ ರೂ. ಬೆಲೆಬಾಳುವ 281 ಗಣೇಶನ ಮೂರ್ತಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಅಲ್ಲದೆ ಪ್ಯಾಸ್ಟರ್ ಪ್ಯಾರಿಸ್ ಗಣೇಶ ಪರಿಸರಕ್ಕೆ ಹಾನಿ ಹೀಗಾಗಿ 2016 ರಲ್ಲೇ ಗಣೇಶ ಮೂರ್ತಿ ಮಾರಾಟಕ್ಕೆ ನಿಷೇಧ ಹೇರಿರೊ ವಿಚಾರವನ್ನು ಮನವರಿಕೆ ಮಾಡಿದರು.

ಆದರೆ ವ್ಯಾಪಾರಿಗಳು ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆಯಲು ಒಪ್ಪಲಿಲ್ಲ. ಪರಿಣಾಮ ಸ್ಥಳದಲ್ಲಿ ಅಧಿಕಾರಿ ಮತ್ತು ವ್ಯಾಪಾರಿಗಳ ನಡುವೆ ಗಂಟೆಗಟ್ಟಲೆ ವಾಗ್ವಾದ ನಡೆಯಿತು. ಕಡೆಯದಾಗಿ ಪಾಲಿಕೆ ಅಧಿಕಾರಿಗಳು ಪೊಲೀಸರ ಸಹಾಯ ಪಡೆದು ಗಣೇಶ ಮೂರ್ತಿ ಸೀಜ್ ಗೆ ಮುಂದಾಗಿದ್ದು, ಹಂತ ಹಂತವಾಗಿ ಗಣೇಶ ಮೂರ್ತಿಗಳನ್ನ ವಶಕ್ಕೆ ಪಡೆಯುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *