3ನೇ ಆಸ್ಟ್ರೇಲಿಯಾ-ಭಾರತ ಪಂದ್ಯಕ್ಕೆ ಸಿಎಎ ಪ್ರತಿಭಟನೆಯ ಆತಂಕ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆಯುವ ಮೂರನೇ ಏಕದಿನ ಪಂದ್ಯಕ್ಕೆ ಸಿಎಎ ವಿರೋಧಿಗಳ ಪ್ರತಿಭಟನೆಯ ಆತಂಕ ಶುರುವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಏಕದಿನ ಪಂದ್ಯಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹೆಚ್ಚಿನ ಭದ್ರತೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆ ಮಾಡಲು ಬಂದ ಕೆಲ ಯುವಕ-ಯುವತಿಯರು ಸಿಎಎ ವಿರೋಧಿ ಬರಹ ಇರುವ ಟೀ-ಶರ್ಟ್ ಧರಿಸಿ ಬಂದ ಪ್ರತಿಭಟನೆ ಮಾಡಿದರು.

ಮುಂಬೈ ಘೋಷಣೆ ಕೂಗುತ್ತಿದ್ದಂತೆ ಪರ-ವಿರೋಧಿ ವಾಗ್ವಾದ ಆರಂಭವಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದ ವೇಳೆ ಭದ್ರತೆ ವಹಿಸಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಪೊಲೀಸರು ಪಂದ್ಯದ ಭದ್ರತೆಯ ಬಗ್ಗೆ ಮೇಲಿಂದ ಮೇಲೆ ಮೀಟಿಂಗ್ ಮಾಡಿ ಭದ್ರತೆ ನೀಲಿ ನಕ್ಷೆಯನ್ನು ರೆಡಿ ಮಾಡಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *