ವಿಧಾನಸೌಧದ ಮುಂದೆ NRC ಗೆಜೆಟ್ ಕಾಪಿ ಸುಟ್ಟುಹಾಕಿದ ವಕೀಲರು

ಬೆಂಗಳೂರು: ಎನ್‍.ಆರ್.ಸಿ ಕಾಯ್ದೆ ವಿರೋಧಿಸಿ ವಕೀಲರು ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಪೌರತ್ವ ನೊಂದಣಿ ಕಾಯ್ದೆಯ ಗೆಜೆಟ್ ಪ್ರತಿಯನ್ನು ಸುಟ್ಟು ಹಾಕಿದ ವಕೀಲರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ವಿಧಾನಸೌಧ ಸುತ್ತ ಮುತ್ತ 144 ಸೆಕ್ಷನ್ ಜಾರಿಯಲ್ಲಿದೆ. ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಹೇಳಿದ್ದರು ಕೂಡ ಕ್ಷಣಾರ್ಧದಲ್ಲಿ ಗೆಜೆಟ್ ಕಾಪಿ ಸುಟ್ಟು ಹಾಕಿದರು. ಪೊಲೀಸರು ಪ್ರತಿಭಟನಾ ನಿರತ ವಕೀಲರನ್ನು ಬಲವಂತವಾಗಿ ಅಲ್ಲಿಂದ ಸಾಗಹಾಕಿದರು. ಅಲ್ಪಸಂಖ್ಯಾತರ ವಿರೋಧಿಯಾದ ಈ ಕಾಯ್ದೆ ವಿರುದ್ಧ ಸಾಂಕೇತಿವಾಗಿ ಗೆಜೆಟ್ ಪ್ರತಿ ಸುಟ್ಟು ಪ್ರತಿಭಟನೆ ಮಾಡಿದ್ದೇವೆ ಎಂದು ವಕೀಲರು ಹೇಳಿದರು.

ಈ ಕಾಯ್ದೆ ಜಾರಿಗೆ ತರುವ ಮೂಲಕ ಅಂಬೇಡ್ಕರ್ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. 144 ಸೆಕ್ಷನ್ ಜಾರಿಯಲ್ಲಿದೆ ಎಂದು ಸುಮ್ಮನಿರೋಕೆ ಆಗೊಲ್ಲ. ಅನ್ಯಾಯವನ್ನು ಸಹಿಸಿಕೊಂಡು ಇರೋದು ದೇಶದ್ರೋಹದ ಕೆಲಸವಾಗುತ್ತೆ ಎಂದು ಗಾಂಧಿಜೀಯೇ ಹೇಳಿದ್ದಾರೆ. ನಾನು ದೇಶದ್ರೋಹಿಯಾಗಲಾರೆ ಹಾಗಾಗಿ ಅನ್ಯಾಯವನ್ನ ಪ್ರತಿಭಟಿಸಿದ್ದೇನೆಂದು ಹಿರಿಯ ವಕೀಲ ಎಸ್ ಬಾಲನ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *