ಹಂದಿ ಮಾಂಸಕ್ಕಾಗಿ ಮುಗಿಬಿದ್ದ ನೂರಾರು ಜನರು

ಬೆಂಗಳೂರು: ಮಹಾಮಾರಿ ಕೊರೊನ ವೈರಸ್ ಭೀತಿಗೂ ಡೋಂಟ್ ಕೇರ್ ಎಂದ ನೂರಾರು ಜನ ಒಂದು ಹಂದಿ ಮಾಂಸಕ್ಕಾಗಿ ಮುಗಿಬಿದ್ದಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಸೊಂಡೆಕುಪ್ಪ ಬೈಪಾಸ್ ಬಳಿ ನಡೆದಿದೆ.

ಈ ವೇಳೆ ಲಾಕ್‍ಡೌನ್ ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ಪಶ್ನೆ ಮಾಡಲು ಮುಂದಾದ ವ್ಯಕ್ತಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಜೊತೆಗೆ ಗುಂಪು ಸೇರಲು ವಿರೋಧ ವ್ಯಕ್ತಪಡಿಸಿದ ನಗರಸಭೆ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಮಾಂಸಕ್ಕಾಗಿ ಬಂದ ಜನರು ಬೆದರಿಸಿದ್ದಾರೆ. ಆದರೆ ನಂತರ ಸ್ಥಳಕ್ಕೆ ಬಂದ ಪೊಲೀಸರು ಲಾಠಿ ಹಿಡಿದು ಗುಂಪನ್ನು ಚದುರಿಸಿದ್ದಾರೆ.

ಲಾಠಿ ಹಿಡಿದು ಗುಂಪನ್ನು ಪೊಲೀಸರು ಚದುರಿಸುತ್ತಿದ್ದಂತೇ, ಹಂದಿ ಮಾಂಸ ಬಿಟ್ಟು ಜನರು ಓಡಿ ಹೋಗಿದ್ದಾರೆ. ಈಗಾಗಲೇ ನೆಲಮಂಗಲ ನಗರದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಮಾಂಸ ಮಾರಾಟ ನಿಷೇಧಿಸಿದೆ. ಆದರೂ ಮಾಂಸಕ್ಕೆ ಜನರು ಮುಗಿಬಿದ್ದಿರುವ ಘಟನೆ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Comments

Leave a Reply

Your email address will not be published. Required fields are marked *