ರಸ್ತೆ ಗುಂಡಿ ಆಯ್ತು, ಈಗ ಪಾರ್ಕ್ ಹೊಂಡಕ್ಕೆ ಬಾಲಕ ಬಲಿ..!

– ಶೋಕಸಾಗರದಲ್ಲಿ ಕುಟುಂಬ
– ಶಾಸಕರಿಂದ 50 ಸಾವಿರ ರೂ. ಧನಸಹಾಯ

ಬೆಂಗಳೂರು/ನೆಲಮಂಗಲ: ರಸ್ತೆ ಗುಂಡಿ ಆಯ್ತು, ಇದೀಗ ಪಾರ್ಕ್ ಹೊಂಡಕ್ಕೆ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ಮಲ್ಲಸಂದ್ರ ವಾರ್ಡಿನ ಪಾರ್ಕ್‍ನಲ್ಲಿ ಶುಕ್ರವಾರ ದುರ್ಘಟನೆ ನಡೆದಿದೆ.

ಪ್ರತಾಪ್(8) ಮೃತ ದುರ್ದೈವಿ ಬಾಲಕ. ಈತ ರುದ್ರಮುನಿ ಹಾಗೂ ಕಾಂತಮ್ಮರ ಎರಡನೇ ಮಗ. ಆಟವಾಡುವ ವೇಳೆ ಬಿಬಿಎಂಪಿ ವತಿಯಿಂದ ನಿರ್ಮಾಣವಾಗಿದ್ದ ಕೆಂಪೇಗೌಡ ಉದ್ಯಾನವನದ ಪಾರ್ಕ್‍ನಲ್ಲಿರುವ ಹೊಂಡಕ್ಕೆ ಬಿದ್ದಿದ್ದಾನೆ. ಇದನ್ನೂ ಓದಿ:  ಡ್ರೋನ್ ದಾಳಿ- 10 ಜನರಿಗೆ ತೀವ್ರ ಗಾಯ

ಮೂಲತಃ ಹಾಸನ ಜಿಲ್ಲೆಯವರಾದ ರುದ್ರಮುನಿ ಕುಟುಂಬ ಕಳೆದ 25 ವರ್ಷಗಳಿಂದ ಮಲ್ಲಸಂದ್ರದಲ್ಲಿ ವಾಸವಾಗಿದೆ. ನಿನ್ನೆ ಆಟವಾಡಲು ಹೋಗಿದ್ದ ಮಗ ಮಧ್ಯಾಹ್ನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ತಮ್ಮನನ್ನು ರಕ್ಷಣೆ ಮಾಡಲು ಅಣ್ಣ ರವಿತೇಜಾ ಮುಂದಾಗಿದ್ದು, ಆತ ಕೂಡ ಹೊಂಡಕ್ಕೆ ಬಿದ್ದಿದ್ದಾನೆ. ಇದನ್ನು ಗಮನಸಿದ ಸ್ಥಳೀಯರು ಕೂಡಲೇ ರವಿತೇಜಾನನ್ನ ಕಾಪಾಡಿದ್ದಾರೆ. ಆದರೆ ತಮ್ಮ ಪ್ರತಾಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಬಾಲಕನ ಮೃತದಲ್ಲಿ ಸಪ್ತಗಿರಿ ಆಸ್ಪತ್ರೆಯಲ್ಲಿದ್ದು, ಹಾಸ್ಪಿಟಲ್ ಮುಂದೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

ಶಾಸಕರಾದ ಶ್ರೀ ಆರ್ ಮಂಜುನಾಥ್ ಅವರು ಮಗುವಿನ ಕುಟುಂಬಕ್ಕೆ 50 ಸಾವಿರ ರೂಗಳ ಧನಸಹಾಯ ಮಾಡಿದರು. ಕುಟುಂಬಕ್ಕೆ ಸರ್ಕಾರದಿಂದ ಮನೆ ಮಂಜೂರು ಮಾಡಿಸುವುದಾಗಿಯು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 627 ಗ್ರಾಂ ಚಿನ್ನ, 24.71 ಲಕ್ಷ ರೂ. ಲೂಟಿ ಮಾಡಿ ಪರಾರಿಯಾಗಿದ್ದ ಕಳ್ಳರು ಅರೆಸ್ಟ್

Comments

Leave a Reply

Your email address will not be published. Required fields are marked *