ಮಂಗಳಮುಖಿಯರ ಮೇಲೆ ಹಣ ಎಸೆದ ಪಂಚಾಯ್ತಿ ಉಪಾಧ್ಯಕ್ಷ

ನೆಲಮಂಗಲ: ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನೋರ್ವ ಮಂಗಳ ಮುಖಿಯರ ಮೇಲೆ ಹಣ ಎಸೆದು ಉದ್ಧಟತನ ಮೆರೆದಿದ್ದಾನೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕುಲವನಹಳ್ಳಿ ಬಳಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬೈಲಪ್ಪ ಕಾಂಚಾಣ ದರ್ಬಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಗ್ರಾಮ ಮಟ್ಟದಲ್ಲಿ ಯಶಸ್ವಿಯಾಗಿ ಸ್ಥಳೀಯ ಆಡಳಿತ ನೀಡಬೇಕಾಗಿದ್ದ ಉಪಾಧ್ಯಕ್ಷ ಜನಸಾಮಾನ್ಯರಿಗೆ ಮಾದರಿಯಾಗಬೇಕಿದ್ದರು. ಆದರೆ ಪಂಚಾಯ್ತಿ ವ್ಯಾಪ್ತಿಯ ಜನ ಬೈಲಪ್ಪ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಹಣ ಎಸೆದು ಅಂಧ ದರ್ಬಾರ್ ಮಾಡಿದ ದೃಶ್ಯ ನೋಡಿದ ಸ್ಥಳೀಯ ಕುಲವನಹಳ್ಳಿ ಮತ್ತು ಲಕ್ಕೇನಹಳ್ಳಿ ಗ್ರಾಮಸ್ಥರು ಸಹ ಉಪಾಧ್ಯಕ್ಷ ಬೈಲಪ್ಪನ ವರ್ತನೆಗೆ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *