ಶೀಘ್ರವೇ ಬೆಂಗಳೂರು-ನೆಲಮಂಗಲ ಫ್ಲೈಓವರ್ ಓಪನ್..!

ಬೆಂಗಳೂರು: ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದ ಪ್ರಯಾಣಿಕರಿಗೆ ಗುಡ್‍ನ್ಯೂಸ್ ಸಿಕ್ಕಿದೆ. ಪೀಣ್ಯ ಫ್ಲೈಓವರ್ ರಿಪೇರಿ ಕಾರ್ಯ ಅಂತಿಮ ಹಂತದಲ್ಲಿದೆ. ಇನ್ನೊಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ಡಿಸೆಂಬರ್ ಕೊನೆಯ ವಾರದ ವೇಳೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿನ ನೆಲಮಂಗಲ-ಗೊರಗುಂಟೆಪಾಳ್ಯ ಫ್ಲೈಓವರ್‍ನ 102-103ನೇ ಪಿಲ್ಲರ್ ನಡುವಿನ ಸ್ಲಾಬ್‍ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಕಂಡುಬಂದಿತ್ತು. ಅದನ್ನ ಸರಿಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫ್ಲೈಓವರ್‍ನ ಸಂಚಾರವನ್ನ ನಿರ್ಬಂಧ ಮಾಡಿತ್ತು. ಪ್ರಾರಂಭದಲ್ಲಿ ಒಂದೇ ವಾರಕ್ಕೆ ದುರಸ್ಥಿ ಕಾರ್ಯ ಮುಗಿಸುವುದಾಗಿ ಹೇಳಿದ್ದ ಅಧಿಕಾರಿಗಳು ತಿಂಗಳಾದರೂ ರಿಪೇರಿ ಕಾರ್ಯ ಮುಗಿಸಿರಲಿಲ್ಲ. ಆದರೆ ಸದ್ಯ ಈಗ ಸಂಪೂರ್ಣ ರಿಪೇರಿ ಕಾರ್ಯ ಮುಗಿದಿದ್ದು, ತಾಂತ್ರಿಕ ದೋಷ ಇದ್ದ ಪಿಲ್ಲರ್ ಗಳಿಗೆ ಸಪೋರ್ಟಿವ್ ಲಿಂಕ್ ಅಳವಡಿಸಿದ್ದಾರೆ.

ಫೈನಲ್ ಆಗಿ ದೆಹಲಿ ಎಂಜಿನಿಯರ್‍ಗಳ ತಂಡ ಫ್ಲೈಓವರ್ ದುರಸ್ತಿ ಕಾರ್ಯ ಪರಿಶೀಲನೆ ಮಾಡಿ ಓಕೆ ಮಾಡೋದೊಂದೆ ಬಾಕಿ. ಈ ವಾರವೇ ದೆಹಲಿ ಇಂಜಿನಿಯರ್ಸ್ ಪರಿಶೀಲನೆ ನಡೆಸಿ ಸಂಚಾರಕ್ಕೆ ಓಕೆ ಅಂದ್ರೆ, ಮುಂದಿನ ಬುಧವಾರ ಅಥವಾ ಗುರುವಾರದಿಂದ ಸಂಚಾರಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ಸಿಎಂ ಇಬ್ರಾಹಿಂ ಜೆಡಿಎಸ್‍ಗೆ ಬಂದರೆ ಸ್ವಾಗತ: ಹೆಚ್‍ಡಿಕೆ

ಗೊರಗುಂಟೆಪಾಳ್ಯ-ನಾಗಸಂದ್ರದ 4 ಕಿಲೋಮೀಟರ್ ದೂರದ ಫ್ಲೈಓವರ್ ಬಂದ್ ಆಗಿದ್ದ ಕಾರಣ ವಾಹನ ಸವಾರರು ಪ್ರತಿನಿತ್ಯ ಟ್ರಾಫಿಕ್, ಆಕ್ಸಿಡಂಟ್ ಸೇರಿದಂತೆ ಒಂದಲ್ಲೊಂದು ತೊಂದರೆಗೆ ಒಳಾಗಾಗುತ್ತಲೇ ಇದ್ದರು. ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತಿದ್ದ ಶಾಸಕ ಮಂಜುನಾಥ್, ಪಶ್ಚಿಮ ವಿಭಾಗದ ಡಿಸಿಪಿ ಕುಲ್ದಿಪ್ ಜೈನ್ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಇನ್ನು ಫ್ಲೈಓವರ್ ನಲ್ಲಿ ಇನ್ನೊಂದು ವಾರದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಸಿಗುವ ನಿರೀಕ್ಷೆ ನಡುವೆ, ಇಂದು ವಿಕೇಂಡ್ ಹಿನ್ನೆಲೆ, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಗೊರಗುಂಟೆಪಾಳ್ಯದಿಂದ ನೆಲಮಂಗಲ ಟೋಲ್ ವರೆಗೂ ವಾಹನಗಳು ಸಾಲುಗಟ್ಟಿ ನಿಂತು ಸ್ಲೋ ಮೂವಿಂಗ್ ನಲ್ಲೇ ಸಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಒಟ್ಟಾರೆ ಒಂದೇ ವಾರದಲ್ಲಿ ರಿಪೇರಿ ಕೆಲಸ ಮುಗಿಸುವ ಭರವಸೆ ನೀಡಿ ತಿಂಗಳಾದರು ಕೆಲಸ ಮುಗಿಸದ ಅಧಿಕಾರಿಗಳು, ಸದ್ಯ ಇನ್ನೊಂದು ವಾರದಲ್ಲಿ ಫ್ಲೈಓವರ್ ಓಪನ್ ಮಾಡೋ ಸುಳಿವು ನೀಡಿದ್ದಾರೆ. ಈ ಬಾರಿಯಾದರೂ ಅಧಿಕಾರಿಗಳ ಮಾತು ಸತ್ಯವಾದರೆ, ಈ ಭಾಗದಲ್ಲಿ ಸಂಚಾರಿಸುವ ವಾಹನ ಸವಾರರು ನೆಮ್ಮದಿಯಿಂದ ಓಡಾಡಲಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ

Comments

Leave a Reply

Your email address will not be published. Required fields are marked *