ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕೆಂದು ಕುಣಿದು ಕುಪ್ಪಳಿಸಿದ ಮೇಯರ್, ಕಮಿಷನರ್

ಬೆಂಗಳೂರು: ಸಿಲಿಕಾನ್ ಸಿಟಿಯ ಮೇಯರ್ ಮತ್ತು ಕಮಿಷನರ್ ಕಬ್ಬನ್ ಪಾರ್ಕ್‍ನಲ್ಲಿ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

ಇಂದು ಸ್ವಚ್ಛ ಸರ್ವೇಕ್ಷಣಾ ಜಾಗೃತಿ ಅಭಿಯಾನ ಕಬ್ಬನ್ ಪಾರ್ಕ್ ನಲ್ಲಿ ನಡೆಯಿತು. ಬೆಂಗಳೂರು ನಗರಿಯ ಸ್ವಚ್ಛತೆಯ ಬಗ್ಗೆ ಸಾರ್ವಜನಿಕಕರಿಗೆ ಅರಿವು ಹಾಗೂ ಸ್ವಚ್ಛ ಅಭಿಯಾನದ ಆಪ್ ಬಿಡುಗಡೆ ಕಾರ್ಯಕ್ರಮವೂ ನಡೆಯಿತು.

ಈ ವೇಳೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಹಾಕಿ ಕಬ್ಬನ್ ಪಾರ್ಕ್ ನಲ್ಲಿ ಮಸ್ತ್ ಮಸ್ತ್ ಸ್ಟೆಪ್ ಹಾಕಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಕಮಿಷನರ್ ಅನಿಲ್ ಕುಮಾರ್ ವಿಭಿನ್ನವಾಗಿ ಜಾಗೃತಿ ಅಭಿಯಾನ ನಡೆಸಿದರು. ಮೇಯರ್ ಕಮಿಷನರ್ ಭರ್ಜರಿ ಸ್ಟೆಪ್‍ಗೆ ಖುಷ್ ಆದ ಸಿಬ್ಬಂದಿ ವರ್ಗದವರು ಕೂಡ ಡ್ಯಾನ್ಸ್ ಗೆ ಸಾಥ್ ನೀಡಿದರು.

Comments

Leave a Reply

Your email address will not be published. Required fields are marked *