ರಾಜ್ಯದಲ್ಲಿ ಡೆಡ್ಲಿ ಕರೋನಾ ಭೀತಿ- ಶಂಕಿತ ಪ್ರಕರಣ ದಾಖಲು

– ಹೆದರುವ ಅವಶ್ಯಕತೆ ಇಲ್ಲ: ಡಾ. ಪಾಟೀಲ್ ಓಂ ಪ್ರಕಾಶ್

ಬೆಂಗಳೂರು: ಚೀನಾದ ಡೆಡ್ಲಿ ಕರೋನಾ ವೈರಸ್ ರಾಜ್ಯದಲ್ಲಿ ಆತಂಕವನ್ನ ಸೃಷ್ಟಿಸಿದೆ. ರಾಜ್ಯದಲ್ಲಿ ಇಬ್ಬರಲ್ಲಿ ಶಂಕಿತ ವೈರಸ್ ಪ್ರರಕಣಗಳು ಬೆಳಕಿಗೆ ಬಂದಿದ್ದು, ಬೆಂಗಳೂರಿನ ಎದೆರೋಗಿಗಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈರಸ್ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶಕ ಡಾ. ಪಾಟೀಲ್ ಓಂ ಪ್ರಕಾಶ್, ಶಂಕಿತ ಪ್ರಕರಣದಲ್ಲಿ ಒಟ್ಟು 9 ಜನರನ್ನು ನಿಗಾದಲ್ಲಿಟ್ಟಿದ್ದೇವೆ. ಈ ಪೈಕಿ ಇಬ್ಬರ ಸ್ಯಾಂಪಲ್ಸ್ ಅನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಲಾಜಿ ಕಳುಹಿಸಲಾಗಿದೆ. ಒಬ್ಬರ ಹೆಲ್ತ್ ರಿಪೋಟ್9 ರಿಸಲ್ಟ್ ಬಂದಿದ್ದು, ಅವ್ರಿಗೆ ಯಾವುದೇ ಸಮಸ್ಯೆಯಿಲ್ಲ. ನೆಗಟಿವ್ ಇದೆ ಎಂದು ಸ್ಪಷ್ಟಪಡಿಸಿದರು.

ಹೊರ ರಾಷ್ಟ್ರಗಳಿಂದ ಬಂದವರನ್ನು ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ರಕ್ತ ಪರೀಕ್ಷೆ ಮಾಡಿ, ಹೆಲ್ತ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈ ವೈರಸ್ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಚೀನಾದಲ್ಲಿ ಸಾವಿನ ಭೀತಿ ಸ್ಟಷ್ಟಿಸಿರುವ ಕರೋನಾ ವೈರಸ್ ಕುರಿತು ವಿಶ್ವದೆಲ್ಲಡೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Comments

Leave a Reply

Your email address will not be published. Required fields are marked *