ಮುನಿಸು ಮರೆತು ಸಿಎಂ ನಿವಾಸಕ್ಕೆ ರಮೇಶ್ ಜಾರಕಿಹೊಳಿ ದೌಡು

– ಕುಮಟಳ್ಳಿಯನ್ನು ಕರೆತಂದ ಜಾರಕಿಹೊಳಿ

ಬೆಂಗಳೂರು: ಮುನಿಸು ಮರೆತು ನೂತನ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮನೆಗೆ ಬಂದಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್‍ವೈ ನಿವಾಸಕ್ಕೆ ಸಚಿವ ಸ್ಥಾನ ವಂಚಿತ ಮಹೇಶ್ ಕುಮಟಳ್ಳಿ ಅವರನ್ನು ಕರೆದುಕೊಂಡು ರಮೇಶ್ ಜಾರಕಿಹೊಳಿ ದಿಢೀರ್ ಭೇಟಿ ನೀಡಿದ್ದಾರೆ. ಜೊತೆಗೆ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ಕುಮಟಳ್ಳಿಗೆ ಪ್ರಬಲ ನಿಗಮ ಮಂಡಳಿಗಾಗಿ ಕೊಡಬೇಕೆಂದು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ನೂತನ ಸಚಿವರ ಪಟ್ಟಿಯಿಂದ ಮಿಸ್ ಆಗಿದ್ದ ಮಹೇಶ್ ಕುಮಟಳ್ಳಿ ಸಿಎಂ ಮೇಲೆ ಬೇಸರಗೊಂಡಿದ್ದರು. ಜೊತೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಗೈರಾಗಿದ್ದರು. ಆದರೆ ರಾತ್ರಿ ಜಾರಕಿಹೊಳಿ ಜೊತೆ ಸಿಎಂ ನಿವಾಸಕ್ಕೆ ಬಂದ ಕುಮಟಳ್ಳಿ, ಸಿಎಂ ಬಿಎಸ್‍ವೈ ಜೊತೆ ಚರ್ಚೆ ಮಾಡಿ ಪ್ರಬಲ ನಿಗಮ ಮಂಡಳಿ ನೀಡುವಂತೆ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದರ ಜೊತೆಗೆ ಸಿಎಂ ಬಿಎಸ್‍ವೈ ನಿವಾಸಕ್ಕೆ ಸಚಿವರಾದ ಲಕ್ಷ್ಮಣ್ ಸವದಿ, ಬೊಮ್ಮಾಯಿ, ಸೋಮಣ್ಣ ಭೇಟಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *