ಪ್ರೀತಿ ಮೇಲೆ ಅನುಮಾನ – ಪ್ರೇಯಸಿ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

ಬೆಂಗಳೂರು: ಪ್ರೀತಿ ಬಗ್ಗೆ ಅನುಮಾನಪಟ್ಟು ಪ್ರೇಯಸಿ ಮನೆಯಲ್ಲೇ ಟೆಕ್ಕಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಿಲಿಕಾನ್ ಸಿಟಿಯ ನಾಗರಬಾವಿಯ ವಿದ್ಯಾಗಿರಿ ಲೇಔಟ್‍ನಲ್ಲಿ ನಡೆದಿದೆ.

ದೆಹಲಿ ಮೂಲದ ಅಂತ್ರಾಜ್ ಜೈಸ್ವಾಲ್ ಜಾರ್ಖಂಡ್ ಮೂಲದ ಟಾಲ್ಡ್ರಾನ್ ಟೆನ್ಜಿನ್ ಳನ್ನು ಪ್ರೀತಿಸುತ್ತಿದ್ದ. ಆದರೆ ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಟೆನ್ಜಿನ್ ಮನೆಗೆ ಅಂತ್ರಾಜ್ ಬಂದಿದ್ದಾನೆ. ಈ ನಡುವೆ ಟಾಲ್ಡ್ರಾನ್ ಟೆನ್ಜಿನ್ ಮೇಲೆ ಅನುಮಾನ ಪಟ್ಟು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾನೆ.

ಈ ವೇಳೆ ಬಿಡಿಸಲು ಹೋದ ಟಾಲ್ಡ್ರಾನ್ ಟೆನ್ಜಿನ್ ಗೂ ಅಂತ್ರಾಜ್ ಚಾಕುವಿನಿಂದ ಇರಿದಿದ್ದಾನೆ. ಈ ಘಟನೆಯಲ್ಲಿ ಇಬ್ಬರಿಗೂ ಗಾಯಗಳಗಿದ್ದು, ಫೋರ್ಟೀಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂತ್ರಾಜ್ ಜೈಸ್ವಾಲ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಟಾಲ್ಡ್ರಾನ್ ಟೆನ್ಜಿನ್ ಬೆಂಗಳೂರು ಕಾಲೇಜುವೊಂದರಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಚಂದ್ರಾಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *