ಪ್ರಚಾರದ ವೇಳೆ ಮುಜುಗರಕ್ಕೀಡಾದ ಡಿವಿಎಸ್‍

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ರೋಡ್ ಶೋ ವೇಳೆ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿವಿ ಸದಾನಂದ ಗೌಡರಿಗೆ ಮುಜುಗರ ಉಂಟಾದ ಪ್ರಸಂಗ ನಡೆಯಿತು.

ಈಗ ಹೆಚ್ಚಾಗಿ ಕೇಳಿ ಬರ್ತಿರೋ ಸ್ಲೋಗನ್ ಅಂದ್ರೆ ಚೌಕೀದಾರ್.. ಚೌಕೀದಾರ್ ಎಂದು. ಆದ್ರೆ ಡಿವಿ ಸದಾನಂದಗೌಡರು ಕೆಆರ್ ಪುರಂನ ಮಹದೇವಪುರದಲ್ಲಿ ಪ್ರಚಾರಕ್ಕೆ ತೆರಳಿದ್ದಾಗ ಚೌಕಿದಾರ್ ಚೋರ್ ಹೇ ಎಂದು ಘೋಷಣೆ ಕೂಗಿದ್ರು. ಘೋಷಣೆಯಿಂದ ರೋಡ್ ಶೋನಲ್ಲಿದ್ದ ಡಿವಿಎಸ್‍ಗೆ ಮುಜುಗರವಾಯ್ತು.

ಆದ್ರೆ ತನಗೆ ಮುಜುಗರವಾದರೂ ತೋರಿಸಿಕೊಳ್ಳದ ಸದಾನಂದಗೌಡರು, ಜೊತೆಗಿದ್ದ ಕಾರ್ಯಕರ್ತರು ಘೋಷಣೆ ಕೂಗಿದವರ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಮಿತ್ ಶಾ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ್ದ ವೇಳೆ ಚೌಕೀದಾರ್ ಶೇರ್ ಎಂದು ಘೋಷಣೆ ಕೂಗಿದ್ದರು.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸದಾನಂದ ಗೌಡರು ಸ್ಪರ್ಧಿಸಿದ್ರೆ, ಮೈತ್ರಿ ಅಭ್ಯರ್ಥಿಯಾಗಿ ಕೃಷ್ಣಬೈರೇಗೌಡರು ಕಣದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *