ಬೆಂಗ್ಳೂರು ಲಾಕ್ ಡೌನ್: ಬಣಗುಡುತ್ತಿದೆ ಸಿಟಿ ಮಾರುಕಟ್ಟೆ

ಬೆಂಗಳೂರು: ಮಹಾಮಾರಿ ಕೊರೊನಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದ ಮಹಾಮಾರಿ ಅಟ್ಟಹಾಸದಿಂದ ಪಾರಾಗಲು ಸರ್ಕಾರ ಹೊಸ ಹೊಸ ಪ್ರಯತ್ನಗಳನ್ನ ಮಾಡುತ್ತಿದೆ.

ಭಾನುವಾರ ದೇಶದ್ಯಾಂತ ಜನತಾ ಕಫ್ರ್ಯೂ ಮುಗಿಯುತ್ತಿದ್ದಂತೆ ಸರ್ಕಾರ ಕೊರೊನಾ ವೈರಸ್ ಹೆಚ್ಚಾಗಿ ಹರಡಿರುವ ಹಾಗೂ ಆಗುತ್ತಿರುವ ಪ್ರಮುಖ 9 ಜಿಲ್ಲೆಗಳನ್ನು ಸೂಕ್ಷ್ಮ ಜಿಲ್ಲೆಗಳನ್ನಾಗಿ ಗುರುತಿಸಿ ಲಾಕ್ ಡೌನ್ ಮಾಡಿದೆ. ಅದರಲ್ಲಿ ಬೆಂಗಳೂರು ನಗರ ಅತಿ ಸೂಕ್ಷ್ಮ ಮತ್ತು ಡೆಂಜರ್ ಜೋನ್ ನಲ್ಲಿದೆ. ಹಾಗಾಗಿ ಇದೇ ತಿಂಗಳು 31ರ ವರೆಗೆ ಬೆಂಗಳೂರು ಲಾಕ್ ಡೌನ್ ಆಗಿದೆ.

ಪ್ರಮುಖವಾಗಿ ಜನರಿಗೆ ಬೇಕಾಗುವ ವಸ್ತುಗಳು ಸಿಗೋ ಅಂಗಡಿಗಳನ್ನ ಹೊರತುಪಡಿಸಿ ಉಳಿದ ಯಾವ ಅಂಗಡಿಗಳು ಮಾಲ್ ಗಳು ಬಂದ್ ಆಗಿರುತ್ತವೆ. ಸಿಟಿ ಮಾರ್ಕೆಟ್ ಚಿತ್ರಣವನ್ನ ಹೊರತಾಗಿಲ್ಲ. ನಿತ್ಯ ಸಾವಿರಾರು ಜನರಿಂದ ತುಂಬಿ ತುಳುಕುತ್ತಿದ್ದ ಕೆ.ಆರ್ ಮಾರ್ಕೇಟ್ ಇಂದು ಬೆಳಗ್ಗೆ ಬಣಗುಡುತ್ತಿತ್ತು.

ಜನ ಇಲ್ಲದೆ ವ್ಯಾಪಾರಸ್ಥರು ವ್ಯಾಪಾರ ಇಲ್ಲದೇ ಖಾಲಿ ಹೊಡೆಯುತ್ತಿದ್ರು. ಬಿಎಂಟಿಸಿ ಸಂಪೂರ್ಣವಾಗಿ ರಸ್ತೆಗೆ ಇಳಿಯದೇ ಇದ್ದಿದ್ದರಿಂದ ಮಾರ್ಕೆಟ್ ಕಡೆ ಜನರು ಮುಖ ಮಾಡಿಲ್ಲ. ಜೊತೆಗೆ ಕಿಲ್ಲರ್ ಕೊರೊನಾ ಭಯಕ್ಕೆ ಮಾರುಕಟ್ಟೆ ಕಡೆ ಜನ ಮುಖ ಮಾಡುತ್ತಿಲ್ಲ ಎಂದು ಪಬ್ಲಿಕ್ ಟಿವಿ ಮುಂದೆ ವ್ಯಾಪಾರಸ್ಥರು ಅಳಲು ತೊಡಿಕೊಂಡರು.

Comments

Leave a Reply

Your email address will not be published. Required fields are marked *