ಇಂದಿರಾ ಕ್ಯಾಂಟೀನ್‍ಗೆ ಸಂಕಷ್ಟ- ಟೆಂಡರ್ ಮುಂದುವರಿಕೆಗೆ ಅಡ್ಡಿ

ಬೆಂಗಳೂರು: ಇಂದಿರಾ ಕ್ಯಾಂಟೀನ್‍ಗಳಿಗೆ ಆಹಾರ ಪೂರೈಸುತ್ತಿರುವ ಚೆಫ್ ಟಾಕ್, ರಿವಾಡ್ರ್ಸ್ ಸಂಸ್ಥೆಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಎಸಿಬಿ ತನಿಖೆ ಎದುರಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಪಾಲಿಕೆಯ ಹಣಕಾಸು ಜಂಟಿ ಆಯುಕ್ತ ವೆಂಕಟೇಶ್ ಕೂಡ ಎಫ್‍ಐಆರ್ ದಾಖಲಿಸಿದ್ದಾರೆ.

ಗುತ್ತಿಗೆ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ಸಬ್ಸಿಡಿ ಹಣ ಪಡೆದು ಸರ್ಕಾರಕ್ಕೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಅವರು, 2018ರಲ್ಲೇ ದಾಖಲೆ ಸಹಿತ ಈ ಹಗರಣವನ್ನು ಬಯಲು ಮಾಡಿದ್ದೆ. ಎರಡೂ ಗುತ್ತಿಗೆ ಸಂಸ್ಥೆಗಳು ನೀಡಿರುವ ಲೆಕ್ಕಚಾರದ ಪ್ರಕಾರ 175 ಇಂದಿರಾ ಕ್ಯಾಂಟೀನ್ ಹಾಗೂ ಹದಿನೈದು ಮೊಬೈಲ್ ಕ್ಯಾಂಟೀನ್‍ಗಳು 62,70,000 ಜನ ಊಟ, ಉಪಹಾರ ಮಾಡುತ್ತಾರೆ ಎಂಬ ತಪ್ಪು ಲೆಕ್ಕ ಕೊಟ್ಟಿದ್ದಾರೆ. ಈ ಮೂಲಕ ಪ್ರತಿ ತಿಂಗಳು ಆರು 6.83 ಕೋಟಿ ರೂ. ಸಬ್ಸಿಡಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಮುಗಿಯದ ಇಂದಿರಾ ಕ್ಯಾಂಟೀನ್ ಗೋಳು – ಬಿಲ್ ಕಟ್ಟಿಲ್ಲವೆಂದು ಲಾಕ್ ಆಯ್ತು ಶೌಚಾಲಯ

ವಂಚನೆಗೆ ಸಂಬಂಧಿಸಿದ ದಾಖಲೆಗಳ ಪ್ರಕಾರ ಮುಖ್ಯಮಂತ್ರಿಗಳು ಹಗರಣವನ್ನು ತನಿಖೆಗೆ ವಹಿಸಿದರು. ಎಸಿಬಿ ತನಿಖೆಯಿಂದ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವ ನಿರೀಕ್ಷೆಯಿದೆ ಎಂದರು.  ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‍ಗಳಿಗೆ ಎದುರಾಯ್ತು ಜಲಮಂಡಳಿ ಸಂಕಷ್ಟ

ಕೆಲವು ಕ್ಯಾಂಟೀನ್‍ಗಳಲ್ಲಿ ಐದಾರು ಜನರೂ ಊಟ ಮಾಡುತ್ತಿಲ್ಲ. ಆದರೆ 1,400 ಜನರ ಊಟದ ಲೆಕ್ಕ ಕೊಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ವಿರುದ್ಧ ಎಫ್‍ಐಆರ್ ದಾಖಲಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು.

Comments

Leave a Reply

Your email address will not be published. Required fields are marked *