ಮಿಣಿಮಿಣಿ ಖ್ಯಾತಿಯ ಕುಮಾರಸ್ವಾಮಿಗೆ ಇದು ಶೋಭೆ ತರಲ್ಲ: ರವಿಕುಮಾರ್

ಬೆಂಗಳೂರು: ಪೊಲೀಸ್ ಇಲಾಖೆಯನ್ನು ಅವಮಾನಿಸುವ ಕೆಲಸ ಮಿಣಿಮಿಣಿಯ ಖ್ಯಾತಿಯ ಕುಮಾರಸ್ವಾಮಿಗೆ ಶೋಭೆ ತರಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮನಸ್ಸೋ ಇಚ್ಚೆ ಮಾತಾಡುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ಮಾಡಿದ್ದಕ್ಕೆ ಪೋಲೀಸ್ ಇಲಾಖೆಯನ್ನು ಅಭಿನಂದಿಸಬೇಕಿತ್ತು.ಆದರೆ ಅವರನ್ನು ಅನುಮಾನಿಸುವ ಕೆಲಸ ಮಾಡಿದ್ದಾರೆ. ಇದು ಮಿಣಿಮಿಣಿ ಖ್ಯಾತಿಯ ಕುಮಾರಸ್ವಾಮಿಗೆ ಶೋಭೆ ತರಲ್ಲ ಎಂದಿದ್ದಾರೆ.

ಕೊಲೆ ಬೆದರಿಕೆ ಇದ್ದರೆ ಸರ್ಕಾರಕ್ಕೆ ದೂರು ನೀಡಲಿ. ಸರ್ಕಾರ ಅವರಿಗೆ ಸೂಕ್ತ ಭದ್ರತೆ ಕೊಡುತ್ತೆ. ಈ ರೀತಿಯ ಮಾತುಗಳನ್ನು ಆಡುತ್ತಿರುವುದರಿಂದಲೇ ಅವರು ಒಂದೂ ಸ್ಥಾನ ಗೆಲ್ಲಲಿಲ್ಲ. ಹೀಗೆ ಮಾತಾಡುತ್ತಾ ಹೋದರೆ ಜೆಡಿಎಸ್ ನೆಲಕಚ್ಚಿ ಹೋಗುತ್ತದೆ. ಅವರು ರಾಜ್ಯದ ಘನತೆ ಎತ್ತಿ ಹಿಡಿಯುವ ಮಾತನ್ನಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಿಣಿಮಿಣಿ ಪೌಡರ್ ಅನ್ನೋದು, ಹದಿನೈದು ದಿನಕ್ಕೊಮ್ಮೆ ಸಿಡಿ ಬಿಡುಗಡೆ ಮಾಡೋದನ್ನ ಬಿಡಲಿ ಎಂದು ರವಿಕುಮಾರ್ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *