ಸಿದ್ದು ವಿರುದ್ಧವೇ ಕುರುಬ ಸಮುದಾಯದ ಅಸ್ತ್ರ ಪ್ರಯೋಗ?

ಬೆಂಗಳೂರು: ಉಪ ಚುನಾವಣಾ ಕಣದಲ್ಲಿ ನಡೆಯುತ್ತಿರೋ ಜಾತಿ ರಾಜಕೀಯಕ್ಕೆ ಟ್ವಿಸ್ಟ್ ದೊರೆತಿದೆ. ಸಿದ್ದರಾಮಯ್ಯ ವಿರುದ್ಧವೇ ಕುರುಬ ಸಮುದಾಯದ ಅಸ್ತ್ರ ಪ್ರಯೋಗ ಮಾಡಲಾಗಿದೆ.

ಹೌದು. ಕುರುಬ ಸಮುದಾಯ ನಿರ್ಣಾಯಕ ಇರುವ ನಾಲ್ಕು ಕ್ಷೇತ್ರಗಳ ಮೇಲೂ ಬಿಜೆಪಿ ಟಾರ್ಗೆಟ್ ಮಾಡಿದೆ. ಯಡಿಯೂರಪ್ಪ ಕ್ಯಾಬಿನೆಟ್ ನಲ್ಲಿ ಕುರುಬ ಸಮುದಾಯದ 5 ಜನ ಮಂತ್ರಿಯಾಗುತ್ತಾರೆ ಎಂಬ ಅಸ್ತ್ರ ಪ್ರಯೋಗ ಮಾಡಲಾಗಿದೆ. ಇದು ರಾಜ್ಯ ರಾಜಕಾರಣದಲ್ಲಿ ಇತಿಹಾಸದಲ್ಲಿ ಉಳಿಯಲಿದೆ ಎಂದು ಸಂದೇಶ ರವಾನಿಸಿ ಪ್ರಚಾರ ಅಸ್ತ್ರವನ್ನಾಗಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈಶ್ವರಪ್ಪ ಈಗಾಗಲೇ ಮಂತ್ರಿಯಾಗಿದ್ದಾರೆ. ರಾಣೇಬೆನ್ನೂರು, ಹುಣಸೂರು, ಹೊಸಕೋಟೆ, ಕೆ.ಆರ್.ಪುರಂನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ನಾಲ್ವರು ಮಂತ್ರಿಯಾಗುತ್ತಾರೆ. ಎಂಟಿಬಿ, ವಿಶ್ವನಾಥ್, ಬೈರತಿ ಬಸವರಾಜು, ಶಂಕರ್ ಮಂತ್ರಿಯಾಗುತ್ತಾರೆ ಎಂಬ ಭಿತ್ತಿಪತ್ರವನ್ನು ಹಂಚುವ ಮೂಲಕ ಬಿಜೆಪಿ ಮುಖಂಡರು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಶುರು ಮಾಡಿದ್ದಾರೆ.

ಈ ಮೂಲಕ ಸಿದ್ದರಾಮಯ್ಯಗೆ ಸಮುದಾಯದ ಅಸ್ತ್ರ ಪ್ರಯೋಗಿಸಿ ಕಟ್ಟಿಹಾಕಲು ಪ್ರಯತ್ನ ಮಾಡಲಾಗುತ್ತಿದೆ. ಹಾಗಾದ್ರೆ ಬಿಜೆಪಿಯ ಜಾತಿ ಅಸ್ತ್ರದಿಂದ ಸಿದ್ದರಾಮಯ್ಯ ತಂತ್ರಗಾರಿಕೆಗೆ ಬ್ರೇಕ್ ಹಾಕಲು ಸಾಧ್ಯನಾ ಅಥವಾ ಕುರುಬ ಸಮುದಾಯದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅಸ್ತ್ರ ಫಲಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *