5 ವರ್ಷದಲ್ಲಿ ಎಷ್ಟು ಸಸಿ ನೆಡಲಾಗಿದೆ – ಅರಣ್ಯ ಅಧಿಕಾರಿಗಳಿಗೆ ಸಿಎಂ ಫುಲ್ ಕ್ಲಾಸ್

ಬೆಂಗಳೂರು: ಇಂದು ವಿಧಾನಸೌಧದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅರಣ್ಯ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಾಡು ಪ್ರಾಣಿಗಳ ದಾಳಿಯಿಂದ ಮೃತ ಪಟ್ಟವರಿಗೆ ಶೀಘ್ರವಾಗಿ ಪರಿಹಾರ ನೀಡಬೇಕು. ಮೊದಲು ಎರಡು ಲಕ್ಷ, ಮರಣೋತ್ತರ ಪರೀಕ್ಷೆ ಬಳಿಕ ಮೂರು ಲಕ್ಷ ಅಂದರೆ ಹೇಗೆ? ಒಂದೇ ಬಾರಿ ಪೂರ್ತಿ ಹಣ ಬಿಡುಗಡೆ ಮಾಡಬೇಕು. ಜನರೇ ನಿಮ್ಮ ಹತ್ತಿರ ಬರಬೇಕೇ? ಸ್ಥಳ ಪರೀಶಿಲನೆಗೆ ನೀವೇ ಹೋಗಬೇಕು. ನೀವೇ ಘಟನಾ ಸ್ಥಳಕ್ಕೆ ಹೋಗಿ ಪರಿಹಾರ ವಿತರಣೆ ಮಾಡಬೇಕು. 5 ಲಕ್ಷ ಮೃತರ ಕುಟುಂಬಕ್ಕೆ ನೀಡಬೇಕು ಎಂದು ಸೂಚಿಸಿದ್ದಾರೆ.

ಅರಣ್ಯ ಇಲಾಖೆಯಿಂದ ಐದು ವರ್ಷಗಳಲ್ಲಿ ಎಷ್ಟು ಸಸಿ ನೆಡಲಾಗಿದೆ. ಈಗಿನ ಪರಿಸ್ಥಿತಿ ಹೇಗಿದೆ? ನೀವೂ ಹಳೇ ಫೋಟೋಗಳನ್ನು ಈಗ ನೀಡೋದಲ್ಲ. ನಾನು ಸ್ಪಾಟ್‍ಗೆ ಭೇಟಿ ನೀಡುತ್ತೇನೆ. ಈಗ ಪರಿಸ್ಥಿತಿ ಹೇಗಿದೆ? ನೀವು ನೆಟ್ಟಿರುವ ಸಸಿಗಳು ಹೇಗಿವೆ ಎಂದು ಪರಿಶೀಲನೆ ನಡೆಸುತ್ತೇನೆ. ಸುಮ್ಮನೆ ಕಾಲ ಕಳೆಯೋದಲ್ಲ ಎಂದು ಅಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡರು.

Comments

Leave a Reply

Your email address will not be published. Required fields are marked *