ಬಿ’ಯಮ’ಟಿಸಿಯ ಅಜಾಗರೂಕತೆ ಡ್ರೈವಿಂಗ್‍ಗೆ ಮತ್ತೊಂದು ಬಲಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿಯ ಅಜಾಗರೂಕತೆಯ ಚಾಲನೆ ನಿಂತ ಹಾಗೆ ಕಾಣುತ್ತಿಲ್ಲ. ಕೊಟ್ಟಿಗೆಪಾಳ್ಯದಲ್ಲಿ ಬಸ್ ದುರಂತ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದು ಹೋಗಿದೆ.

ಸುಮನಹಳ್ಳಿಯಲ್ಲಿ ಸಿಗ್ನಲ್ ಬಿತ್ತು ಎಂದು ನಿಂತಿದ್ದ ಬುಲೆಟ್ ಸವಾರನಿಗೆ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಮುಂದಿದ್ದ 407 ಟೆಂಪೋಗೆ ಅಪ್ಪಳಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಜಯ್ ಕುಮಾರ್ ಸಾವನ್ನಪ್ಪಿದ ಬೈಕ್ ಸವಾರ ಎಂದು ಗುರುತಿಸಲಾಗಿದೆ.

ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಲಾಗಿದೆ. ಡಿಪೋ ನಂ 16ರ 410 ಕೆಎ57 ಎಫ್ 1557 ಬಸ್ ಆಗಿದ್ದು, ಗೊರಗುಂಟೆಪಾಳ್ಯ ಟು ಬನಶಂಕರಿ ಮಾರ್ಗದಲ್ಲಿ ಓಡಾಡ್ತಿತ್ತು. ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಚಾಲಕ ಎಸ್ಕೇಪ್ ಆಗಿದ್ದಾನೆ. ಸದ್ಯ ಈ ಸಂಬಂಧ ಕಾಮಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *