ಸಚಿವ ಸ್ಥಾನಕ್ಕಾಗಿ ದೈವ ಮಾನವನ ಮೊರೆ

ಬೆಂಗಳೂರು: ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನದಿಂದ ವಂಚಿತರಾದ ಮಾಜಿ ಸಚಿವ ಹಾಗೂ ಹಾಲಿ ಶಾಸಕರೊಬ್ಬರು ದೈವ ಮಾನವನ ಮೊರೆ ಹೋಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ನೋವಿನಲ್ಲಿ ಶಾಸಕ ಅರವಿಂದ ಲಿಂಬಾವಳಿ, ವಿನಯ್ ಗುರೂಜಿ ಮೊರೆ ಹೋಗಿದ್ದಾರೆ. ದೈವ ಮಾನವನ ಮಾತು ಕೇಳಿ ಲಿಂಬಾವಳಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ಜೊತೆಗೆ ಮೂಲ ಬಿಜೆಪಿ ಶಾಸಕರು ಕೆಲವರು ಸಚಿವರಾಗಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಮೂಲ ಬಿಜೆಪಿ ಶಾಸಕರ ಪ್ರಮಾಣ ವಚನ ಸ್ವೀಕಾರ ರದ್ದಾಗಿತ್ತು. ಹಾಗೆಯೇ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡವರಲ್ಲಿ ಶಾಸಕ ಅರವಿಂದ ಲಿಂಬಾವಳಿ ಸಹ ಒಬ್ಬರು. ತಮಗಾದ ಕೊನೆ ಗಳಿಗೆಯ ನಿರಾಸೆಯಿಂದ ಬೇಸರಗೊಂಡ ಲಿಂಬಾವಳಿ ದೈವ ಮಾನವ ವಿನಯ ಗುರೂಜಿ ಮೊರೆ ಹೋಗಿದ್ದಾರೆ.

ಜೆಡಿಎಸ್‍ನ ವಿಧಾನ ಪರಿಷತ್ ಸದಸ್ಯ ಶರವಣ ಜೊತೆ ವಿನಯ್ ಗುರೂಜಿಯನ್ನ ಭೇಟಿಯಾಗಿ ತಮ್ಮ ಮನದ ಇಚ್ಛೆಯನ್ನ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿತಿಸಿರುವ ವಿನಯ್ ಗುರೂಜಿ, ಸಚಿವರಾಗಲು ಇನ್ನೂ ಸ್ವಲ್ಪ ಸಮಯದವರೆಗೆ ಕಾಯುವುದು ಅನಿವಾರ್ಯ ಎಂದಿದ್ದಾರೆ. ಅಲ್ಲಿಗೆ ತಮಗೆ ಸಚಿವ ಸ್ಥಾನದ ಯೋಗ ಸದ್ಯಕ್ಕೆ ಇಲ್ಲಾ ಎಂಬುದು ಶಾಸಕ ಅರವಿಂದ ಲಿಂಬಾವಳಿಗೆ ಖಚಿತವಾಗಿದೆ. ಮೊದಲೇ ಸಚಿವ ಸ್ಥಾನದಿಂದ ಕೊನೆ ಗಳಿಗೆಯಲ್ಲಿ ವಂಚಿತರಾದ ಅರವಿಂದ ಲಿಂಬಾವಳಿ ಸದ್ಯಕ್ಕೆ ಸಚಿವ ಸ್ಥಾನದ ಅವಕಾಶ ಇಲ್ಲ ಎನ್ನುವ ದೈವ ಮಾನವನ ಮಾತು ಕೇಳಿ ಮತ್ತಷ್ಟು ಬೇಸರಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *