ಕಾಗೋಡು ಸೋತ್ರು ಅನ್ನೋದಕ್ಕಿಂತ ಹರತಾಳು ಹಾಲಪ್ಪ ಗೆದ್ರು ಎಂಬುದೇ ಬೇಳೂರಿಗೆ ಸಂಕಟ: ಆಯನೂರು ಮಂಜುನಾಥ್

ಶಿವಮೊಗ್ಗ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹತಾಶರಾಗಿ, ಇತಿ-ಮಿತಿ ಮೀರಿ ಮಾತನಾಡಿದ್ದಾರೆ. ಇಷ್ಟು ಮಾತನಾಡುವಷ್ಟು ಬೇಳೂರು ದೊಡ್ಡವರಲ್ಲ. ಕಾಗೋಡು ಸೋತರು ಎಂಬುದಕ್ಕಿಂತ ಹರತಾಳು ಹಾಲಪ್ಪ ಗೆದ್ದರು ಎಂಬುದೇ ಬೇಳೂರಿಗೆ ಸಂಕಟ ತಂದಿದೆ. ಅವರು ಹಾಲಪ್ಪ ಸೋಲಲಿ ಎಂದು ಹರಕೆ ಹೊತ್ತಿರಬೇಕು ಎಂದು ಬಿಜೆಪಿ ಶಾಸಕ ಆಯನೂರು ಮಂಜುನಾಥ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾಗೋಡು ತಿಮ್ಮಪ್ಪ ಅವರ ಹಿರಿತನಕ್ಕೆ ಬೆಲೆ ಕೊಟ್ಟಿದ್ದೇವೆ. ಬೇಳೂರು ಗೋಪಾಲಕೃಷ್ಣ ಅಸಮರ್ಥರು ಎಂದು ಬಿಜೆಪಿ ಭಾವಿಸಿಲ್ಲ. ಆದರೆ ಈ ಚುನಾವಣೆ ಪರಿಸ್ಥಿತಿಗೆ ಹಾಲಪ್ಪ ಸೂಕ್ತ ಎಂದು ಪಕ್ಷ ನಿರ್ಧರಿಸಿದೆ ಅಂತ ಹೇಳಿದ ಅವರು ಐಟಿ ಇಲಾಖೆಯವರು ಬೇಳೂರು ಅವರನ್ನು ಬಂಧಿಸಲಿ ಅಂದ್ರು.

ಶೋಭಾ ಕರಾಂದ್ಲಾಜೆ ಮನೆಯಲ್ಲಿ ಅಪಾರ ಹಣ ಇದೆ ಎಂದಿದ್ದಾರೆ. ಈ ಮಾಹಿತಿ ಇದ್ದರೂ ಮುಚ್ಚಿಟ್ಟು ತಪ್ಪು ಮಾಡಿದ್ದಾರೆ. ಇದು ಕಾನೂನು ಬಾಹಿರ, ಇದನ್ನು ಕ್ಷಮಿಸಬಾರದು. ಅವರ ಬಳಿ ಇರುವ ದಾಖಲೆಗಳ ಆಧಾರದ ಮೇಲೆ ದಾಳಿ ನಡೆಸಲಿ. ದಯಮಾಡಿ ತಮ್ಮ ಬಳಿ ಇರುವ ಎಲ್ಲಾ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗೆ ಒಪ್ಪಿಸಬೇಕು. ಇಲ್ಲವಾದಲ್ಲಿ ಹಗುರವಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೇಳಬೇಕು. ಇವೆರಡೂ ಮಾಡದಿದ್ದಲ್ಲಿ ಬೇಳೂರು ವಿರುದ್ಧ ಕಾನೂನು ಕ್ರಮಕ್ಕೆ ಬಿಜೆಪಿ ಮುಂದಾಗಲಿದೆ ಎಂದು ಹೇಳಿದ್ದಾರೆ.  ಡಿಕೆಶಿ ನನ್ನತ್ರನೂ ಒಂದು ಡೈರಿ ಇದೆ ಅಂತ  ಹೆದರಿಸೋದು ಬೇಡ. ಇದ್ದಲ್ಲಿ ತಕ್ಷಣ ಬಿಡುಗಡೆ ಮಾಡಲಿ ಅಂದ್ರು.

Comments

Leave a Reply

Your email address will not be published. Required fields are marked *