ಸಿದ್ದರಾಮಯ್ಯ ಮಂಜೂರು ಮಾಡಿದ್ದ ಯೋಜನೆಗೆ ಸ್ವಪಕ್ಷೀಯ ಸಚಿವನೇ ಅಡ್ಡಿ

ಬಳ್ಳಾರಿ: ಜಿಲ್ಲೆಯಲ್ಲಿ ಸೇಡಿನ ರಾಜಕೀಯ ಆರಂಭವಾಯ್ತಾ ಎನ್ನುವ ಅನುಮಾನವೊಂದು ಮೂಡಿದೆ. ಯಾಕೆಂದರೆ ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ ಕಾಮಗಾರಿಗೆ ಸ್ವಪಕ್ಷೀಯ ಸಚಿವನಿಂದಲೇ ಅಡ್ಡಿಯಾಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೌದು. ಮುಜುರಾಯಿ ಸಚಿವ ಪಿಟಿ ಪರಮೇಶ್ವರ್ ನಾಯಕ್ ಹಾಗೂ ಶಾಸಕ ಭೀಮಾ ನಾಯ್ಕೆ ನಡುವೆ ನೀರಾವರಿ ಯೋಜನೆಗಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಮೂಲಕ ಬಳ್ಳಾರಿಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ನಾಯಕರ ಜಗಳ ಬೀದಿಗೆ ಬಂದಿದೆ. ಭೀಮಾ ನಾಯ್ಕ್ ಹೀಗೆ ರೈತ ಸಭೆಯಲ್ಲಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ವಿರುದ್ಧ ಪರಮೇಶ್ವರ್ ನಾಯ್ಕ್ ಸೇಡು ತೀರಿಸಿಕೊಳ್ಳಲು ಹಗರಿಬೊಮ್ಮನಹಳ್ಳಿಯ ಜನರ 50 ವರ್ಷದ ಕನಸಾಗಿರುವ 26 ಹಳ್ಳಿಗೆ ಜೀವನಾಡಿಯಾಗುವ ಮಾಲವಿ ಜಲಾಶಯಕ್ಕೆ ನೀರುಣಿಸುವ ಯೋಜನೆಗೆ ಅಡ್ಡಿ ಪಡಿಸಿದ್ದಾರೆ ಆರೋಪ ಕೇಳಿಬಂದಿದೆ.

ಅಡ್ಡಿ ಯಾಕೆ?:
ಕಾಮಗಾರಿ ಕೆಲಸದಲ್ಲಿ ಪರ್ಸೆಂಟೆಜ್ ಸಿಕ್ಕಿಲ್ಲ ಎಂದು ಪಿಟಿಪಿ ಯೋಜನೆಗೆ ಅಡ್ಡಿ ಪಡಿಸುತ್ತಿದ್ದಾರೆ. ನಾಮಫಲಕದಲ್ಲಿ ತನ್ನ ಹೆಸರು ಹಾಕುವಂತೆ ಪಿಟಿಪಿ ಮಸಲತ್ತು ಹಾಕಿದ್ದಾರೆ. ಇವನ್ಯಾವ ಸಚಿವರು ಯೋಜನೆ ಭೂಮಿ ಪೂಜೆ ಮಾಡೋಕೆ? ಎರಡು ವರ್ಷದಿಂದ ಪಿಟಿಪಿ ಕಿರುಕುಳ ಕೊಡುತ್ತಿದ್ದಾನೆ. ಈ ವಿಷಯವನ್ನ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿ ಎಲ್ಲರ ಗಮನಕ್ಕೂ ತಂದಿದ್ದರೂ ಬಗೆ ಹರಿದಿಲ್ಲ. ಈಗ ನನ್ನ ಕೈಯಲ್ಲಿ ತಡಿಯೋಕ್ ಆಗಲ್ಲ, ಒಂದಲ್ಲ ಹತ್ತು ಸಾವಿರ ರೈತರನ್ನ ಸಚಿವನ ಮನೆ ಮುಂದೆ ಸೇರಿಸ್ತೀನಿ ಎಂದು ಪರಮೇಶ್ವರ್ ನಾಯ್ಕ್ ಹೇಳುವ ಮೂಲಕ ರೈತರ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಯೋಜನೆ ಹಿನ್ನೆಲೆಯೇನು?:
ಹಗರಿಬೊಮ್ಮನಹಳ್ಳಿ ಕ್ಷೇತ್ರದ 26 ಹಳ್ಳಿಗೆ ನೀರುಣಿಸುವ ಮಾಲವಿ ಜಲಾಶಯಕ್ಕೆ ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ನೀರುಣಿಸಲು 153 ಕೋಟಿ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಭೂಮಿ ಪೂಜೆ ಮಾಡಿದ್ದರು. ಆದರೆ ಒಂದೂವರೆ ವರ್ಷವಾದರೂ ಯೋಜನೆ ಪೂರ್ಣವಾಗಿಲ್ಲ. ಯೋಜನೆ ವಿಳಂಬಕ್ಕೆ ಸಚಿವರು ಕಾರಣ ಎಂದು ಶಾಸಕ ಭೀಮಾನಾಯ್ಕ್ ಆರೋಪಿಸುತ್ತಿದ್ದಾರೆ.

ಮಾಲವಿಗೆ ನೀರೊಯ್ಯಲು ಹೂವಿನಹಡಗಲಿ ಕ್ಷೇತ್ರದ ರಾಜೊಳ್ಳಿಯ ಬಳಿ ಜಾಕ್ವೆಲ್ ಕೂರಿಸಿ, ಪೈಪ್ ಲೈನ್ ಮಾಡಬೇಕು. ಹೀಗಾಗಿ ತನ್ನ ಕ್ಷೇತ್ರದ ರೈತನ ನೆರವಿನಿಂದ ಸಚಿವ ಪಿಟಿಪಿ ಈ ಯೋಜನೆ ಪೂರ್ಣವಾಗಲು ಬಿಡ್ತಿಲ್ಲ ಎಂದು ಭೀಮಾನಾಯಕ್ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *