ಬಳ್ಳಾರಿಯನ್ನು ಇಬ್ಭಾಗ ಮಾಡಲು ಬಿಡಲ್ಲ- ಶಾಸಕ ಸೋಮಶೇಖರ್ ರೆಡ್ಡಿ

– ಹೊಸಪೇಟೆಯನ್ನು ಜಿಲ್ಲೆಯಾಗಿ ಮಾಡ್ಬೇಡಿ

ಬಳ್ಳಾರಿ: ಜಿಲ್ಲೆಯನ್ನು ಇಬ್ಭಾಗ ಮಾಡಲು ಬಿಡಲ್ಲ. ಹೊಸಪೇಟೆ ಜಿಲ್ಲೆ ಮಾಡಿದರೆ ಇದೊಂದು ತುಘಲಕ್ ದರ್ಬಾರ್ ಆಗುತ್ತದೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ನಗರದ ತಾಳೂರು ರಸ್ತೆಯ ಒಂದನೇ ವಾರ್ಡಿನಲ್ಲಿ ಮಳೆ ಹಾನಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ರಚನೆ ಮಾಡುವ ವಿಚಾರ ನಮಗೆ ಒಪ್ಪಿಗೆ ಇಲ್ಲ. ಬಳ್ಳಾರಿ ಜಿಲ್ಲೆಯ ಹೆಸರನ್ನೇ ವಿಜಯನಗರ ಎಂದು ಬದಲಿಸಿವುದು ಭಾವನಾತ್ಮಕ ವಿಚಾರ, ಮುಂದೆ ಕೂಡ ಅಖಂಡ ಜಿಲ್ಲೆ ಒಗ್ಗಟ್ಟಾಗಿಯೇ ಇರಬೇಕು. ಈ ಬಗ್ಗೆ ಸಿಎಂ ಅವರನ್ನು ಭೇಟಿ ಮಾಡುತ್ತೇವೆ. ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಸಿಎಂ ಅವರನ್ನು ಭೇಟಿ ಮಾಡುತ್ತೇವೆ. ಜಿಲ್ಲೆಯನ್ನು ವಿಭಜಿಸುವ ಪ್ರಕ್ರಿಯೆಗೆ ಸ್ವಾಮೀಜಿಗಳು ಬೆಂಬಲ ನೀಡಿರುವುದು ಬೇಸರ ತರಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಹೊಸಪೇಟೆ ಜಿಲ್ಲೆ ಆಗ್ಬೇಕು- ಎರಡು ವಿಶೇಷ ವಿಮಾನದಲ್ಲಿ ಬರಲಿದೆ ನಿಯೋಗ

ನಿಯೋಗದ ಜೊತೆಗೆ ಹೋದವರೆಲ್ಲ ಸ್ವಾರ್ಥಿಗಳು. ಯಾರದ್ದೋ ಸ್ಚಾರ್ಥಕ್ಕೆ ವಿಜಯನಗರ ಜಿಲ್ಲೆ ಮಾಡುತ್ತಿದ್ದಾರೆ ಎಂದು ಶಾಸಕರು, ಆನಂದ್ ಸಿಂಗ್ ಗೆ ಟಾಂಗ್ ಕೊಟ್ಟರು. ಆಖಂಡ ಬಳ್ಳಾರಿ ಜಿಲ್ಲೆ ನಮ್ಮ ಆಗ್ರಹ. ಬಳ್ಳಾರಿಗೆ ಜಿಲ್ಲೆಗೆ ವಿಜಯನಗರವೆಂದು ನಾಮಕರಣ ಮಾಡಿ. ಬೆಳಗಾವಿಯಲ್ಲಿ 18 ತಾಲೂಕುಗಳಿವೆ. ಅನಂತಪುರ ಜಿಲ್ಲೆ 300 ಕಿ.ಮಿ. ವಿಸ್ತೀರ್ಣ ಇದೆ. ಅವರಗಿಲ್ಲದ ತೊಂದರೆ ನಮಗೆ ಬಂದಿದೆಯಾ? ಬೆಳಗಾವಿ ಯಾಕೆ ವಿಭಜನೆ ಮಾಡ್ತಿಲ್ಲ? ಬಳ್ಳಾರಿಯೇ ಕಣ್ಣಿಗೆ ಕಾಣ್ತಿದೆಯಾ? ಜಿಲ್ಲೆಯ ಯಾವ ನಾಯಕರ ಅಭಿಪ್ರಾಯವೂ ಪಡೆದಿಲ್ಲ. ಹೀಗಾಗಿ ಈ ಬಗ್ಗೆ ತರಾತುರಿಯಲ್ಲಿ ಘೋಷಣೆ ಮಾಡದಂತೆ ಸಿಎಂ ಬಳಿ ಮನವಿ ಮಾಡುವುದಾಗಿ ತಿಳಿಸಿದರು.

Comments

Leave a Reply

Your email address will not be published. Required fields are marked *