ಹಂಪಿಗೆ ಬರೋ ವಿದೇಶಿಗರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣು

ಬಳ್ಳಾರಿ: ಕೊರೊನಾ ವೈರಸ್ ಅನ್ನು ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಿಸಿದೆ. ಹೀಗಾಗಿ ಕೊರೊನಾದಿಂದ ರಕ್ಷಿಸಲು ಪ್ರವಾಸೋದ್ಯಮ ಇಲಾಖೆ ಹಂಪಿಗೆ ಭೇಟಿ ನೀಡುವ ಮೂಲಕ ಪ್ರತಿ ವಿದೇಶಿ ಪ್ರವಾಸಿಗರನ ತಪಾಸಣೆಗೆ ಮುಂದಾಗಿದೆ.

ವಿಶ್ವ ವಿಖ್ಯಾತ ಹಂಪಿ, ವಿದೇಶಿಗರನ್ನು ಸೂಜಿಗಲ್ಲಿನ ಹಾಗೆ ತನ್ನತ್ತ ಸೆಳೆಯುತ್ತಿದೆ. ಆದರೆ ಕೊರೊನಾ ಭೀತಿಯಿಂದ ಕಳೆದೊಂದು ತಿಂಗಳಿಂದ ಹಂಪಿಗೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಈ ಮುನ್ನ 1500 ರಿಂದ 2000 ಮಂದಿ ಪ್ರತಿದಿನ ಭೇಟಿ ನೀಡುತ್ತಿದ್ದರು. ಆದರೆ ಇದೀಗ ಪ್ರವಾಸಿಗರ ಸಂಖ್ಯೆ ನೂರಕ್ಕೆ ಏರುತ್ತಿಲ್ಲ. ಇದಕ್ಕೆ ಕಾರಣ ಡೆಡ್ಲಿ ಕೊರೊನಾ ವೈರಸ್.

ವಿದೇಶಿ ಪ್ರವಾಸಿಗರ ಮೂಲಕ ಕೊರೊನಾ ಹರಡುತ್ತೆ ಎಂಬ ಭೀತಿಯಿಂದ ಹಂಪಿಗೆ ಭೇಟಿ ನೀಡುವ ಪ್ರತೀ ವಿದೇಶಿ ಪ್ರವಾಸಿಗನ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪ್ರತಿ ವಿದೇಶಿ ಪ್ರವಾಸಿಗನಿಗೆ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಆನಂತರ ಹಂಪಿ ಪ್ರವೇಶಕ್ಕೆ ಅನುಮತಿ ನೀಡಲಾಗ್ತಿದೆ. ಒಂದು ವೇಳೆ ಪರೀಕ್ಷೆ ವೇಳೆ ಜ್ವರ, ಕೆಮ್ಮು, ನೆಗಡಿಯ ಲಕ್ಷಣಗಳು ಕಂಡು ಬಂದರೆ ಹಂಪಿ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಹಂಪಿಯ ಗೈಡ್ ಸಂಜೀವ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ತಡೆಗೆ ಆರೋಗ್ಯ ಇಲಾಖೆ ಇನ್ನಿಲ್ಲದ ಸಾಹಸ ಮಾಡ್ತಿದೆ. ಆದರೆ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗೆ ಮುಂದುವರಿದರೆ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬೀಳುವುದಂತು ಸುಳ್ಳಲ್ಲ.

Comments

Leave a Reply

Your email address will not be published. Required fields are marked *