ಮಾನಸಿಕ ಅಸ್ವಸ್ಥನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಬಳ್ಳಾರಿ: ಮಾನಸಿಕ ಅಸ್ವಸ್ಥನನ್ನು ಕೊಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಗರದಲ್ಲಿ ಇಂದು ನಸುಕಿನ ಜಾವ ನಡೆದಿದೆ.

ನಗರದ ಸತ್ಯನಾರಾಯಣ ಪೇಟೆಯ ನಿವಾಸಿ ಕಾಶಿನಾಥ್ (42) ಕೊಲೆಯಾದ ಮಾನಸಿಕ ಅಸ್ವಸ್ಥ. ನಗರದ ಹೃದಯ ಭಾಗದಲ್ಲಿರುವ ಸರಳಾದೇವಿ ಕಾಲೇಜು ಬಳಿಯ ಮುನ್ಸಿಪಲ್ ಮೈದಾನದ ಗೇಟ್ ನಂಬರ್ ಎರಡರ ಸಮೀಪದಲ್ಲಿ ಕೊಲೆ ನಡೆದಿದೆ. ಬಳಿಕ ದುಷ್ಕರ್ಮಿಗಳು ಕಾಶಿನಾಥ್ ಮೃತದೇಹವನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದಾರೆ.

ಕೊಲೆಗೆ ಮೂಲ ಕಾರಣ ಏನೆಂದು ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಗಾಂಧಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆದರೆ ಕೊಲೆ ಮಾಡಿ ಚರಂಡಿಗೆ ಹಾಕಿ ಕಲ್ಲು ಮುಚ್ಚಿದ್ದನ್ನು ನೋಡಿದ ಪೊಲೀಸರು ಇದೊಂದು ಉದ್ದೇಶ ಪೂರ್ವಕವಾಗಿ ಮಾಡಿದ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಾನಸಿಕ ಅಸ್ವಸ್ಥತ ಕಾಶಿನಾಥ್ ಹೆಚ್ಚಾಗಿ ಮನೆಯಿಂದ ಹೊರಗಡೆ ಇರುತಿದ್ದ. ಹೀಗಾಗಿ ಕೊಲೆ ಯಾರು ಮಾಡಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.

Comments

Leave a Reply

Your email address will not be published. Required fields are marked *