ರೈಲು ನಿಲ್ದಾಣ ಅಭಿವೃದ್ಧಿಗೆ ಮನವಿ – ಸಚಿವ ಅಂಗಡಿ ಭೇಟಿಯಾದ ಕರಾವಳಿ ನಿಯೋಗ

ಬೆಳಗಾವಿ: ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಇಂದು ಬೆಳಗ್ಗೆ ರಾಜ್ಯ ಸಚಿವ ಸುರೇಶ್ ಅಂಗಡಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕರಾವಳಿಯ ರೈಲ್ವೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಕರಾವಳಿಯಿಂದ ರಾಜಧಾನಿಗೆ ಸಂಪರ್ಕಕ್ಕೆ ನೂತನ ರೈಲ್ವೆ ಆರಂಭಿಸಲು ಮತ್ತು ಕರ್ನಾಟಕ ಕರಾವಳಿ ನಿಲ್ದಾಣಗಳ ಅಭಿವೃದ್ಧಿ ಕ್ರಮಕ್ಕೆ ಸಮಿತಿ ಆಗ್ರಹಿಸಿತು.

ಇಂದು ರಾಜ್ಯ ರೈಲ್ವೆ ಸಚಿವರನ್ನು ಭೇಟಿಯಾದ ನಿಯೋಗ ಕರಾವಳಿ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಚಿವ ಅಂಗಡಿ ನೂತನ ಬೆಂಗಳೂರು ಕಾರವಾರ ರೈಲಿಗೆ ಈಗಾಗಲೇ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ರೈಲು ಸೀಟು ಕಾಯ್ದಿರಿಸುವ ಕೇಂದ್ರ ಮತ್ತು ಕೊಚುವೆಲಿ – ಮುಂಬೈ ರೈಲಿಗೆ ಕುಂದಾಪುರದಲ್ಲಿ ನಿಲುಗಡೆ ಮನವಿ ಸಲ್ಲಿಸಿದರು. ಸಮಿತಿಯ ನಿಯೋಗದಲ್ಲಿ ಅಧ್ಯಕ್ಷ ಗಣೇಶ್ ಪುತ್ರನ, ಕೊಂಕಣ ರೈಲು ಸಲಹಾ ಸಮಿತಿಯ ಸದಸ್ಯ ಮತ್ತು ಕುಮಟಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ, ರಾಜೀವ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಟಿ, ಉದ್ಯಮಿ ಸುಧಾಕರ ಶೆಟ್ಟಿ, ಮತ್ತು ಸದಸ್ಯ ಜೋಯ್ ಇದ್ದರು.

Comments

Leave a Reply

Your email address will not be published. Required fields are marked *