ಮಕ್ಕಳ ಬಿಸಿಯೂಟದಲ್ಲಿ ಹುಳು – ಶಾಲೆಗೆ ರಜೆ ಘೋಷಿಸಿದ ಶಿಕ್ಷಕರು

ಬೆಳಗಾವಿ: ಮಕ್ಕಳ ಬಿಸಿಯೂಟದಲ್ಲಿ ಹುಳುಗಳು ಕಾಣಿಸಿಕೊಂಡಿದ್ದಕ್ಕೆ ಹೆದರಿ ಶಿಕ್ಷಕರು ಶಾಲೆಗೆ ರಜೆ ಘೋಷಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಬಿಸಿಯೂಟದಲ್ಲಿ ಹುಳ ಕಾಣಿಸಿಕೊಂಡಿದ್ದಕ್ಕೆ ಶಿಕ್ಷಕರು ಮಕ್ಕಳಿಗೆ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ. ಇದರಿಂದ ಮಧ್ಯಾಹ್ನದ ಬಿಸಿಯೂಟವಿಲ್ಲದೆ 400 ಕ್ಕೂ ಹೆಚ್ಚು ಮಕ್ಕಳ ಪರದಾಡಿದ್ದಾರೆ. ಶುಚಿತ್ವವಿಲ್ಲದೆ ಅಡುಗೆ ತಯಾರಿಸಿದ್ದೆ ಊಟದಲ್ಲಿ ಹುಳು ಕಾಣಿಸಿಕೊಳ್ಳಲು ಕಾರಣ ಎಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಳು ಬಿದ್ದ ಊಟ ನೀಡಿದರೆ ತೊಂದರೆಯಾಗುತ್ತದೆ. ಮಕ್ಕಳು ಖಾಲಿ ಹೊಟ್ಟೆಯಲ್ಲಿ ಪಾಠ ಕೇಳುವುದಿಲ್ಲ ಎಂದು ಶಿಕ್ಷಕರು ಶಾಲೆಗೆ ರಜೆ ಘೋಷಣೆ ಮಾಡಿದ್ದಾರೆ. ಅದ್ದರಿಂದ ವಿದ್ಯಾರ್ಥಿಗಳು ಮಧ್ಯಾಹ್ನ ಊಟ ಮಾಡದೆ ಹಾಗೆ ಬರಿ ಹೊಟ್ಟೆಯಲ್ಲಿ ಮನೆಗೆ ಹೋಗಿದ್ದಾರೆ. ಮನೆಗೆ ಬೇಗ ಬಂದ ಮಕ್ಕಳನ್ನು ವಿಚಾರಿಸಿದ ಪೋಷಕರಿಗೆ ವಿಷಯ ತಿಳಿದು ಬಂದಿದೆ. ಹುಳು ಬಿದ್ದಿದ್ದಕ್ಕೆ ಮಕ್ಕಳಿಗೆ ಬೇರೆ ಅಡುಗೆ ವ್ಯವಸ್ಥೆ ಮಾಡದೆ ಶಾಲೆಗೆ ರಜೆ ಘೋಷಿಸಿ ಹೊರಟು ಹೋದ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ವಿರುದ್ಧ ಪಾಲಕರು ಅಸಮಾಧಾನ ಹೊರಹಾಕಿದ್ದಾರೆ.

Comments

Leave a Reply

Your email address will not be published. Required fields are marked *