ಉಗ್ರರೊಂದಿಗೆ ಹೋರಾಟ-ವೀರ ಮರಣವನ್ನಪ್ಪಿದ ಬೆಳಗಾವಿ ಯೋಧ

ಬೆಳಗಾವಿ (ಚಿಕ್ಕೋಡಿ): ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೂದಿಹಾಳ್ ಗ್ರಾಮದ ಯೋಧ ವೀರ ಮರಣವನ್ನಪ್ಪಿದ್ದಾರೆ.

ಪ್ರಕಾಶ್ (ಭೋಜರಾಜ್) ಪುಂಡಲೀಕ ಜಾಧವ್ (28) ಹುತಾತ್ಮ ಯೋಧರಾಗಿದ್ದಾರೆ. ಯೋಧ ಭೋಜರಾಜ್ ಜಮ್ಮು ಮತ್ತು ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ತಡರಾತ್ರಿ ಉಗ್ರರೊಂದಿಗಿನ ನಡೆದ ಗುಂಡಿನ ಚಕಮಕಿಯಲ್ಲಿ ಹೋರಾಡಿ, ವೀರ ಸ್ವರ್ಗವನ್ನಪ್ಪಿದ್ದಾರೆ.

ಭೋಜರಾಜ್ ಮರಾಠಾ ರೆಜಿಮೆಂಟಿನಲ್ಲಿ ಕಳೆದ 11 ವರ್ಷಗಳಿಂದ ಯೋಧರಾಗಿದ್ದರು. ಅಲ್ಲದೇ ಇವರ ತಂದೆಯೂ ಕೂಡ ನಿವೃತ್ತ ಸೈನಿಕರಾಗಿದ್ದಾರೆ. ಮೃತ ಭೋಜರಾಜ್ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ಮುದ್ದಾದ ಮೂರು ತಿಂಗಳ ಹೆಣ್ಣು ಮಗುವನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ದೀಪಾವಳಿ ಹಬ್ಬವನ್ನು ಮುಗಿಸಿ ಸೇನೆಗೆ ವಾಪಾಸ್ಸಾಗಿದ್ದರು. ಯೋಧ ಭೋಜರಾಜ್ ಹೆಂಡತಿ, ಮಗು, ತಂದೆ-ತಾಯಿ ಹಾಗೂ ಓರ್ವ ಸಹೋದರರನ್ನು ಅಗಲಿದ್ದಾರೆ.

ಜಾಧವ್ ಸಾವಿನ ಸುದ್ದಿಯಿಂದಾಗಿ ಕುಟುಂಬಸ್ಥರು ಹಾಗೂ ಸ್ವಗ್ರಾಮದಲ್ಲಿ ನೀರವ ಮೌನ ಮಡುಗಟ್ಟಿದೆ. ಬುಧವಾರ ಮಧ್ಯಾಹ್ನ ಯೋಧ ಜಾಧವ್ ರ ಪಾರ್ಥಿವ ಶರೀರ ಬೂದಿಹಾಳ ಗ್ರಾಮಕ್ಕೆ ಬರುತ್ತದೆಂದು ತಿಳಿದು ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *