ಇನ್‍ಸ್ಟಾಗ್ರಾಂನಲ್ಲಿ Sorry ಅಂತಾ ಬರೆದು ಬಿಕಾಂ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಇನ್ ಸ್ಟಾ ದಲ್ಲಿ Sorry ಎಂದು ಬರೆದು ಬಿಕಾಂ ಓದುತ್ತಿರುವ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಾಗದೇನಹಳ್ಳಿಯಲ್ಲಿ ನಡೆದಿದೆ.

ಮನೋಜ್(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಂಡ್ಯ ಮೂಲದವನಾಗಿರುವ ಈತ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ. ಅಜ್ಜಿ ಮನೆಯಲ್ಲಿ ಇದ್ದುಕೊಂಡು ಕಾಲೇಜ್‍ಗೆ ಹೋಗ್ತಿದ್ದ. ಆದರೆ ಕೆಲ ದಿನಗಳಿಂದ ಕಾಲೇಜ್‍ಗೆ ಹೋಗದೆ ಒಬ್ಬನೇ ಇರ್ತಿದ್ದನಂತೆ. ಕಳೆದ ಒಂದು ವಾರದಿಂದ ವಾಟ್ಸಪ್ ಸ್ಟೇಟಸ್‍ನಲ್ಲಿ ಸ್ಯಾಡ್ ಸ್ಟೋರಿ ಟೆಕ್ಸ್ಟ್ ಹಾಕಿಕೊಳ್ತಿದ್ನಂತೆ. ಮನೆಯವರು ಸ್ನೇಹಿತರು ಇದ್ಯಾವುದನ್ನು ಗಂಭೀರವಾಗಿ ತಗೊಂಡಿಲ್ಲ. ನಿನ್ನೆ ರಾತ್ರಿ ತನ್ನ ಇನ್ಸ್ಟಾಗ್ರಾಂನಲ್ಲಿ ಸಾರಿ ಅಂತಾ ಬರೆದುಕೊಂಡು ನೇಣಿಗೆ ಕೊರಳೊಡ್ಡಿದ್ದಾನೆ. ಇದನ್ನೂ ಓದಿ: ಸ್ಕೂಲ್ ಮೆಟ್ಟಿಲು, ಕಾಂಪೌಂಡ್, ರಸ್ತೆಯಲ್ಲೆಲ್ಲಾ Sorry- ವ್ಯಕ್ತಿಗಾಗಿ ಪೊಲೀಸರು ಹುಡುಕಾಟ

ಮನೋಜ್ ಸಾವಿನ ಸುತ್ತ ನೂರೆಂಟು ಅನುಮಾನ: ಮನೋಜ್ ಮನೆಯಲ್ಲಷ್ಟೇ ಅಲ್ಲ, ಕಾಲೇಜಿನಲ್ಲೂ ಒಳ್ಳೆ ವಿದ್ಯಾರ್ಥಿ ಎನಿಸಿಕೊಂಡಿದ್ದ. ಚೆನ್ನಾಗಿ ಓದುತ್ತಿದ್ದ ಮನೋಜ್‍ಗೆ ಏಕಾಏಕಿ ಏನಾಯಿತೋ ಏನೋ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೋಜ್ ಯಾರೊಂದಿಗಾದ್ರು ಪ್ರೀತಿಯಲ್ಲಿ ಬಿದ್ದಿದ್ನಾ..? ಅಥವಾ ಯಾರ ಜೊತೆಗಾದ್ರು ಗಲಾಟೆ ಮಾಡಿಕೊಂಡಿದ್ನಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಕಾಲೇಜು ಗೋಡೆ, ರಸ್ತೆ ಮೇಲೆ Sorry ಬರಹ ಪ್ರಕರಣ- ಕೆಟಿಎಂ ಡ್ಯೂಕ್‍ನಲ್ಲಿ ಬಂದ ಇಬ್ಬರಿಂದ ಕೃತ್ಯ?

ಕೆಲ ದಿನಗಳ ಹಿಂದೆಯಷ್ಟೇ ಕಾಮಾಕ್ಷಿಪಾಳ್ಯದ ಖಾಸಗಿ ಕಾಲೇಜು ಬಳಿ ಗೋಡೆ, ರಸ್ತೆಗಳ ತುಂಬೆ ಸಾರಿ ಸಾರಿ ಅಂತ ಬರೆಯಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಸಾರಿ ಪ್ರಕರಣ ಬೆಳಕಿಗೆ ಬಂದಿದೆ. ಮನೋಜ್ ಸಾವಿಗೆ ಅಸಲಿ ಕಾರಣ ಏನು ಅಂತ ಪೊಲೀಸರು ತನಿಖೆ ನಡೆಸ್ತಿದ್ದಾರೆ.

Comments

Leave a Reply

Your email address will not be published. Required fields are marked *