ತಮ್ಮ ಜೀವವನ್ನು ಲೆಕ್ಕಿಸದೇ ಜನರ, ವನ್ಯ ಜೀವಿಗಳ ರಕ್ಷಣೆ ಮಾಡುವವರಿಗೆ 3 ವರ್ಷದಿಂದ ಸಂಬಳವೇ ಇಲ್ಲ

ಬೆಂಗಳೂರು: ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಎಚ್ಚೆತ್ತ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ, ಪೌರ ಕಾರ್ಮಿಕರ 6 ತಿಂಗಳ ಬಾಕಿ ಸಂಬಳವನ್ನು ಬಿಡುಗಡೆ ಮಾಡಿದೆ. ಆದರೆ ಅದೇ ಬಿಬಿಎಂಪಿಯಲ್ಲಿ ಕೆಲಸ ಮಾಡುವ ನೌಕರರಿಗೆ ಕಳೆದ ಮೂರು ವರ್ಷದಿಂದ ಸಂಬಳವನ್ನೇ ನೀಡಿಲ್ಲ.

ಹೌದು, ಬಿಬಿಎಂಪಿಯ ಅಧಿಕಾರಿಗಳು ಮಾತ್ರ ತಿಂಗಳು ತಿಂಗಳಿಗೆ ಸರಿಯಾಗಿ ಸಂಬಳ ಪಡೆದು ಆರಾಮಗಿ ಇರುತ್ತಾರೆ. ಆದರೆ ಇಲ್ಲಿ ಕೆಲಸ ಮಾಡುವ ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಆರೇಳು ತಿಂಗಳ ಸಂಬಳ ಬಾಕಿ ಉಳಿಸಿದ್ದು ಗೊತ್ತೆ ಇದೆ. ಸುಬ್ರಮಣ್ಯ ಪೌರ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡ ಮೇಲೆ ಬಾಕಿ ಹಣವನ್ನ ಬಿಡುಗಡೆ ಮಾಡಿದ್ದಾರೆ.

ಈ ಸಂಬಂಧ ಮೇಯರ್ ಸಂಪತ್ ರಾಜ್ ಅಧಿಕಾರಿಗಳಿಗೆ ಕಂಟ್ರಾಕ್ಟರ್ ಗಳಿಗೆ ಫುಲ್ ಚಾರ್ಜ್ ಕೂಡ ಮಾಡಿದ್ದರು. ಆದರೆ ಅದೇ ಬಿಬಿಎಂಪಿಯಲ್ಲಿ ವನ್ಯಜೀವಿ ಸಂರಕ್ಷಣಾ ಘಟಕದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಕರಿಗೆ ಕಳೆದ ಮೂರು ವರ್ಷದಿಂದ ಗೌರವ ಧನ ನೀಡೆ ಇಲ್ಲ. ಇರುವ 11 ಜನ ಸದಸ್ಯರಿಗೆ ತಿಂಗಳಿಗೆ 11 ಸಾವಿರ ರೂಪಾಯಿ ಅಂತಾ ಗೌರವ ಧನ ನಿಗದಿಯೇನೋ ಮಾಡಿದ್ದಾರೆ. ಆದರೆ ಆ ಸಂಬಳ ಮಾತ್ರ ಇನ್ನು ನೀಡಿಲ್ಲ.

ಬೆಂಗಳೂರಿನಲ್ಲಿ ಮಳೆಗಾಲ ಪ್ರಾರಂಭವಾದಾಗ ಹಾವುಗಳು ಹೆಚ್ಚು ಕಾಣಿಸಿಕೊಳ್ಳುತ್ತದೆ ಆಗ ನಾವು ಬಿಬಿಎಂಪಿ ಅಧಿಕಾರಿಗಳಿಗೆ ನೆನಪಾಗುತ್ತೀವೆ. ಅವರ ಮನೆಗೆ ಹಾವು ಬಂದರೂ ನಾವೇ ರಕ್ಷಣೆ ಮಾಡೋದು. ಎಲ್ಲೇ ಬಂದರೂ ನಾವೇ ರಕ್ಷಣೆ ಮಾಡೋದು. ನಾವು ಅನೇಕ ವರ್ಷಗಳಿಂದ ವನ್ಯ ಜೀವಿಗಳ ರಕ್ಷಣೆ ಮಾಡುತ್ತಿದ್ದೇವೆ. ನಮ್ಮ ಜೀವವನ್ನು ಲೆಕ್ಕಿಸದೇ ಜನರ ಮತ್ತು ವನ್ಯ ಜೀವಿಗಳ ರಕ್ಷಣೆ ಮಾಡುತ್ತೀವಿ. ಆದರೆ ನಮ್ಮ ಜೀವನಕ್ಕೆ ಬಿಬಿಎಂಪಿ ರಕ್ಷಣೆ ನೀಡುತ್ತಿಲ್ಲ. ನಮ್ಮಲ್ಲೂ ಯಾರಾದರೂ ಸತ್ತಾಗ ನಮ್ಮ ಕಡೆ ಗಮನ ಹರಿಸುತ್ತಾರೆ ಅಂತಾ ತಮ್ಮ ನೋವನ್ನ ಮೋಹನ್ ಹಂಚಿಕೊಂಡಿದ್ದಾರೆ.

ಬಿಬಿಎಂಪಿಯಲ್ಲಿ ಸದ್ಯ 11 ಜನ ವನ್ಯ ಜೀವಿ ರಕ್ಷಕರಿದ್ದು, ಆ ಸಂಖ್ಯೆಯನ್ನ 33 ಕ್ಕೆ ಹೆಚ್ಚಿಸಲು ಹಾಗೂ ಹಳೆ ಬಾಕಿ ಸಂಬಳವನ್ನ ನೀಡಿ ಗೌರವ ಧನವನ್ನ ಹೆಚ್ಚಿಸಿ ಅಂತಾ ಮೇಯರ್ ಗೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *