BB ವಿನ್ನರ್ ಪಟ್ಟ ಒಬ್ಬರಿಗೆ, ಆದರೆ ಹಣ ಎಲ್ಲರಿಗೂ..!

ಬಿಗ್‍ಬಾಸ್ ಮನೆಯಲ್ಲಿ ಫಿನಾಲೆ ತುಂಬಾ ಗ್ರ್ಯಾಂಡ್ ಆಗಿಯೇ ನಡೆಯುತ್ತಿದೆ. ಸೀಸನ್ 8ರ ವಿನ್ನರ್ ಪಟ್ಟವನ್ನು ಯಾರು ಮುಡಿಗೇರಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಎದುರು ನೋಡುತ್ತಿರುವ ಹೊತ್ತಿಗೆ ಸುದೀಪ್ ಒಂದು ಸರ್‍ಪ್ರೈಸ್‍ನ್ನು ಸ್ಪರ್ಧಿಗಳಿಗೆ ನೀಡಿದ್ದಾರೆ.

ಬಿಗ್‍ಬಾಸ್ ಗೆದ್ದವರಿಗೆ 53 ಲಕ್ಷ ರೂಪಾಯಿ, ರನ್ನರ್ ಅಪ್‍ಗೆ 11 ಲಕ್ಷ ರೂಪಾಯಿ, ಮೂರನೇ ಸ್ಥಾನದವರಿಗೆ 6 ಲಕ್ಷ ರೂಪಾಯಿ, ನಾಲ್ಕನೇ ಸ್ಥಾನದವರಿಗೆ 3.5 ಲಕ್ಷ ರೂಪಾಯಿ ಹಾಗೂ ಐದನೇ ಸ್ಥಾನದವರಿಗೆ 2.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಬಿಗ್‍ಬಾಸ್ ಮನೆಯಲ್ಲಿ ಟಾಪ್ 5 ಅಲ್ಲಿ ಇರುವ ನೀವು ಯಾರೂ ಖಾಲಿ ಕೈಯಿಂದ ವಾಪಸ್ ಹೋಗಲ್ಲ ಎಂದು ಸುದೀಪ್ ಘೋಷಣೆ ಮಾಡಿದ್ದಾರೆ.

 

ಬಿಗ್‍ಬಾಸ್ ಸ್ಪರ್ಧಿಗಳಿಗೆ ಸಿಗುತ್ತಿರುವ ಬಹುಮಾನದ ಮೊತ್ತದ ಹಣದಲ್ಲಿ ಏರಿಕೆಯಾಗಿದೆ. ಪ್ರತಿ ಬಾರಿ ಗೆದ್ದವರಿಗೆ 50 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಈ ಮೊತ್ತದಲ್ಲಿ 3 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ. ಇನ್ನು ರನ್ನರ್ ಅಪ್‍ಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಟಾಪ್ 5ರಲ್ಲಿರುವ ಎಲ್ಲರಿಗೂ ಮೊತ್ತ ನೀಡಲಾಗುತ್ತಿದೆ. ಸ್ಪರ್ಧಿಗಳು ಈ ವಿಚಾರವನ್ನು ಕೇಳಿ ಸಖತ್ ಖುಷಿಪಟ್ಟಿದ್ದಾರೆ.

ಇಲ್ಲಿ ಗೆಲ್ಲುವ ಹಣವನ್ನು ಯಾರು ಯಾವ ಕಾರ್ಯಕ್ಕೆ ಬಳಸಿಕೊಳ್ಳಿತ್ತೀರಾ, ಬಿಗ್‍ಬಾಸ್ ಗೆಲ್ಲುವುದು ಎಷ್ಟು ಮುಖ್ಯವಾಗಿರುತ್ತದೆ ಎಂದು ಸುದೀಪ್ ಕೇಳಿದಾಗ, ವೈಷ್ಣವಿ, ಮಂಜು ಪಾವಗಡ, ದಿವ್ಯಾ ಉರುಡುಗ, ಅರವಿಂದ್, ಸಂಬರಗಿ ತಮ್ಮದೇ ಆಗಿರುವ ವಿಶಿಷ್ಟ ಕಾರಣವನ್ನು ಹೇಳಿಕೊಂಡಿದ್ದಾರೆ. ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿ ಕೊಳ್ಳಬೇಕು. ಮನೆ ಖರೀದಿ ಮಾಡುತ್ತೇನೆ. ಸ್ಕೂಲ್ ಪ್ರಾರಂಭಿಸುತ್ತೇನೆ, ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಬಿಗ್ ಬಾಸ್ ವಿನ್ ಆಗುವುದು ಬಹುಮುಖ್ಯ ಎಂದು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ. ಈ ಭಾರೀ ಮೊತ್ತದ ಹಣ ಹಾಗೂ ಬಿಗ್‍ಬಾಸ್ ವಿನ್ನರ್ ಪಟ್ಟ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments

Leave a Reply

Your email address will not be published. Required fields are marked *