ಮದ್ಯಪ್ರಿಯರಿಗಿಲ್ಲ ಬಂದ್ ಬಿಸಿ- ಬೆಳ್ಳಂಬೆಳಗ್ಗೆ ಬಾರ್​ಗೆ ಮಹಿಳೆ ಎಂಟ್ರಿ

– ಬಂದ್ ಆದ್ರೂ ಕೊಪ್ಪಳದಲ್ಲಿ ಬಾರ್ ಓಪನ್

ಕೊಪ್ಪಳ: ಎರಡು ದಿನ ಕಾರ್ಮಿಕ ಮುಷ್ಕರ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಭಾರತ್ ಬಂದ್ ಘೋಷಣೆಯಾಗಿದೆ. ಆದರೆ ಕೊಪ್ಪಳದಲ್ಲಿ ಬೆಳ್ಳಂಬೆಳ್ಳಗೆ ಬಾರ್ ಓಪನ್ ಆಗಿದ್ದು, ಮದ್ಯ ಪ್ರಿಯರು ಫುಲ್ ಖುಷಿಯಾಗಿದ್ದಾರೆ.

ಇಂದು ಬಂದ್ ಇದ್ದರೂ ಕೂಡ ಬಾರ್ ಮಾಲೀಕರು ಬೆಳ್ಳಂಬೆಳ್ಳಗೆ ತಮ್ಮ ಅಂಗಡಿಯನ್ನು ಓಪನ್ ಮಾಡಿದ್ದಾರೆ. ಹಾಗಾಗಿ ಬೆಳ್ಳಂಬೆಳ್ಳಗೆ ಮದ್ಯ ಪ್ರಿಯರು ಬಾರ್ ಮುಂದೆ ಹಾಜರಾಗಿದ್ದಾರೆ. ಬಾರ್ ಓಪನ್ ಆಗುತ್ತಿದ್ದಂತೆಯೇ ಮಹಿಳೆಯೊಬ್ಬರು ಎಣ್ಣೆ ಹೊಡೆಯಲು ಬಂದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಭಾರತ್ ಬಂದ್ ದಿನ ಕೂಡ ಬಾರ್ ಓಪನ್ ಇರುವುದು ಎಲ್ಲಾ ಕುಡುಕರಿಗೂ ಖುಷಿ ತಂದಿದೆ. ಎಲ್ಲರೂ ಬಾರ್ ಮುಂದೆ ಮದ್ಯಪಾನ ಮಾಡಿ ಖುಷಿಪಡುತ್ತಿದ್ದಾರೆ.

ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು, ಬೆಂಗಳೂರು ಗ್ರಾ., ಮಂಡ್ಯ, ಮೈಸೂರು, ಕೋಲಾರ, ಚಾಮರಾಜನಗರ, ಬಳ್ಳಾರಿ, ಧಾರವಾಡ, ಉತ್ತರ ಕನ್ನಡ, ತುಮಕೂರು, ರಾಯಚೂರು, ದಾವಣಗೆರೆ, ರಾಮನಗರ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಬಾಗಲಕೋಟೆ, ಬೀದರ್, ಕಲಬುರಗಿ, ಗದಗ, ಚಿಕ್ಕಬಳ್ಳಾಪುರ, ಕೊಪ್ಪಳ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಮಡಿಕೇರಿ, ಚಿಕ್ಕಮಗಳೂರು, ವಿಜಯಪುರ, ಹಾವೇರಿ, ಹಾಸನ, ಯಾದಗಿರಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್‍ಗೆ ಈವರೆಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಹೀಗಾಗಿ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *