ಮದ್ಯ ಕೊಡದ್ದಕ್ಕೆ ಕಲ್ಲಿನಿಂದ ಬಾರ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

ರಾಯಚೂರು: ಕುಡಿಯಲು ಮದ್ಯ ಕೊಡದಿದ್ದಕ್ಕೆ ಮದ್ಯವ್ಯಸನಿಗಳು ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ.

ಜಾಲಹಳ್ಳಿ ರಸ್ತೆಯಲ್ಲಿರುವ ಕ್ಷೀರಸಾಗರ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕ ರವೀಂದ್ರ ಅಕ್ಕರಿಕೆ ಮೇಲೆ ಮೂವರು ಮದ್ಯವ್ಯಸನಿಗಳು ಮದ್ಯ ಕೊಡದ ಕಾರಣಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ದೇವದುರ್ಗದ ಅಂಜಳ ಗ್ರಾಮದ ಮೂವರು ಮದ್ಯವ್ಯಸನಿಗಳು, ಶುಕ್ರವಾರ ಸಂಜೆ ಬಾರ್ ಮುಂಭಾಗದಲ್ಲಿ ಮದ್ಯ ನೀಡುವಂತೆ ಪೀಡಿಸಿದ್ದಾರೆ. ಆದರೆ ಬಾರ್ ಪರವಾನಗಿ ಸಿಎಲ್-7 ಹೊಂದಿದ್ದು, ಸರ್ಕಾರ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿಲ್ಲ. ಹೀಗಾಗಿ ಬಾರ್ ಅಂಗಡಿ ತೆರೆಯುದಿಲ್ಲ ಎಂದು ಬಾರ್ ಮುಂದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಬಾರ್ ಮಾಲೀಕ ಹೇಳಿದ್ದಾರೆ.

ಕಂಠ ಪೂರ್ತಿ ಕುಡಿದು ಬಂದ ಮೂವರು ವ್ಯಸನಿಗಳು, ರವೀಂದ್ರ ಜೊತೆ ಮದ್ಯ ನೀಡುವಂತೆ ವಾಗ್ವಾದಕ್ಕೆ ಇಳಿದಿದ್ದಾರೆ. ಮದ್ಯ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಅಬಕಾರಿ ಇಲಾಖೆ ಬಾರ್‌ಗೆ ಸೀಲ್ ಹಾಕಿದೆ. ಹೀಗಾಗಿ ಮದ್ಯ ಮಾರಾಟ ಮಾಡಲು ಬರುವುದಿಲ್ಲ ಎಂದು ಮಾಲೀಕ ರವೀಂದ್ರ ಅವರಿಗೆ ಮನವರಿಕೆ ಮಾಡಿದ್ದಾರೆ. ಆದರೂ ಮಾತು ಕೇಳದ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.

ಮಾಲೀಕ ರವೀಂದ್ರಗೆ ಕಲ್ಲಿನಿಂದ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *