ನಿಮಿಷಾಂಭ ದೇವಾಲಯದ ಹುಂಡಿಯಲ್ಲಿ ಬ್ಯಾನ್ ಆಗಿರೋ ನೋಟುಗಳು ಪತ್ತೆ

ಮಂಡ್ಯ: 500 ಹಾಗೂ 1 ಸಾವಿರ ನೋಟುಗಳು ಅಮಾನ್ಯಗೊಂಡು ವರ್ಷಗಳೇ ಕಳೆದಿದೆ. ಆದರೆ ದೇವಾಲಯದ ಹುಂಡಿಗಳಲ್ಲಿ ಭಕ್ತರು ಇನ್ನೂ ಅಮಾನ್ಯಗೊಂಡ ನೋಟುಗಳನ್ನು ಕಾಣಿಕೆ ರೀತಿ ಹುಂಡಿಗೆ ಈಗಲೂ ಹಾಕುತ್ತಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ನಲ್ಲಿರುವ ಪ್ರಸಿದ್ಧ ನಿಮಿಷಾಂಭ ದೇವಾಲಯದ 18 ಕಾಣಿಕೆ ಹುಂಡಿ ಸುರಿದು ಏಣಿಕೆ ಮಾಡಲಾಯಿತು. ಹುಂಡಿಯಲ್ಲಿ ಒಟ್ಟು 32.5 ಲಕ್ಷ ರೂ. ಸಂಗ್ರಹವಾಗಿದ್ದು, ಅಮಾನ್ಯಗೊಂಡಿರುವ 1 ಸಾವಿರ ಮುಖ ಬೆಲೆಯ 2 ನೋಟು ಹಾಗೂ 500 ಮುಖ ಬೆಲೆಯ 6 ನೋಟುಗಳು ದೊರೆತಿವೆ. ಕಾಣಿಕೆ ಹುಂಡಿಯಲ್ಲಿ 90 ಗ್ರಾಂ ಚಿನ್ನ, 140 ಗ್ರಾಂ ಬೆಳ್ಳಿ ಯನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದರು.

ಅಮಾನ್ಯಗೊಂಡ ನೋಟುಗಳನ್ನು ಎಸೆಯಲು ಮನಸ್ಸು ಬಾರದೆ ಹುಂಡಿಗೆ ಹಾಕುತ್ತಿರುವ ಭಕ್ತರ ನಡವಳಿಕೆ ಮಾತ್ರ ವಿಚಿತ್ರವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *